ಕರ್ನಾಟಕ

karnataka

ETV Bharat / state

ವೆಂಕಟಾಚಲ ಅವರು ಭೀಷ್ಮ ಪಿತಾಮಹನಂತಿದ್ದರು: ಸಚಿವ ಸುರೇಶ್ ಕುಮಾರ್ - ವೆಂಕಟಾಚಲ ಅವರ ನಿಧನ ವೇದನೆ ತಂದಿ

ನಿವೃತ್ತ ಲೋಕಾಯುಕ್ತ ಜಸ್ಟೀಸ್​​ ವೆಂಕಟಾಚಲ ಅವರ ನಿಧನ ವೇದನೆ ತಂದಿದೆ. ನಮ್ಮ ಮನೆಯ ಹಿರಿಯ ಸದಸ್ಯರೊಬ್ಬರನ್ನು ಕಳೆದುಕೊಂಡಂತಾಗಿದೆ ಎಂದು ಸಚಿವ ಸುರೇಶ್ ಕುಮಾರ್ ಸಂತಾಪ ಸೂಚಿಸಿದರು.

ಸುರೇಶ್ ಕುಮಾರ್

By

Published : Oct 30, 2019, 12:40 PM IST

ಕಲಬುರಗಿ:ನಿವೃತ್ತ ಲೋಕಾಯುಕ್ತ ಜಸ್ಟೀಸ್​​ ವೆಂಕಟಾಚಲ ಅವರ ನಿಧನಕ್ಕೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಸಂತಾಪ ಸೂಚಿಸಿದ್ದಾರೆ.

ಜಸ್ಟೀಸ್​​ ವೆಂಕಟಾಚಲ ಅವರ ನಿಧನಕ್ಕೆ ಸುರೇಶ್ ಕುಮಾರ್ ಕಂಬನಿ

ಕಲಬುರ್ಗಿಯಲ್ಲಿ ಮಾತನಾಡಿದ ಅವರು, ವೆಂಕಟಾಚಲ ಅವರು ಲೋಕಾಯುಕ್ತ ಸಂಸ್ಥೆ ಏನೆಂಬುದನ್ನು ತೋರಿಸಿಕೊಟ್ಟು, ಭೀಷ್ಮ ಪಿತಾಮಹನಂತಿದ್ದರು. ಅವರ ವಿನಯತೆ, ಸರಳತೆ ನಮಗೆ ಮಾರ್ಗದರ್ಶಕವಾಗಿತ್ತು.

ದೊಡ್ಡ ಮಹನೀಯರೊಬ್ಬರು ನಿಧನರಾಗಿದ್ದಾರೆ. ಈ ಸುದ್ದಿಯಿಂದ ವೇದನೆಯಾಗಿದೆ. ನಮ್ಮ ಮನೆಯ ಹಿರಿಯ ಸದಸ್ಯರೊಬ್ಬರನ್ನು ಕಳೆದುಕೊಂಡಂತಾಗಿದೆ. ಅವರ ಆತ್ಮಕ್ಕೆ ಸದ್ಗತಿ ಸಿಗಲಿ ಎಂದು ಸುರೇಶ್ ಕುಮಾರ್ ಕಂಬನಿ ಮಿಡಿದಿದ್ದಾರೆ.

ABOUT THE AUTHOR

...view details