ಕರ್ನಾಟಕ

karnataka

ETV Bharat / state

ಲಾಕ್​ಡೌನ್ ಸಡಿಲಿಕೆ: ಮನ ಬಂದಂತೆ ರಸ್ತೆಗಿಳಿದ ಜನ

ಸೇಡಂನಲ್ಲಿ ಲಾಕ್​ಡೌನ್ ಸಡಿಲಿಕೆಯಾಗುತ್ತಿದ್ದಂತೆ ಇಲ್ಲಿನ ಜನರು ಸಾಮಾಜಿಕ ಅಂತರ ಕಾಪಾಡಿಕೊಳ್ಳದೆ ಮನ ಬಂದಂತೆ ಓಡಾಡುತ್ತಿದ್ದಾರೆ.

By

Published : May 2, 2020, 3:57 PM IST

people are not maintaining a social gap
ಮನಬಂದಂತೆ ಜಮಾಯಿಸ ತೊಡಗಿದ ಜನ

ಸೇಡಂ: ಲಾಕ್​ಡೌನ್ ಸಡಿಲಿಕೆಯಾಗುತ್ತಿದ್ದಂತೆ ಜನ ರಸ್ತೆಗಿಳಿಯುತ್ತಿದ್ದು, ಸಾಮಾಜಿಕ ಅಂತರಕ್ಕೆ ತಿಲಾಂಜಲಿ ಇಟ್ಟಂತಹ ವಾತಾವರಣ ನಿರ್ಮಾಣವಾಗಿದೆ.

ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಾವಿರಾರು ಜನ ಪ್ರತಿನಿತ್ಯ ಓಡಾಡುವುದು ಸಾಮಾನ್ಯವಾಗಿದೆ. ಮೊದ ಮೊದಲು ಕಿರಾಣಿ ಅಂಗಡಿ, ಮೆಡಿಕಲ್ ಮತ್ತು ಹಣ್ಣು, ತರಕಾರಿ ಅಂಗಡಿ ತೆರೆದಿರುತ್ತಿದ್ದವು. ಈಗ ಬಟ್ಟೆ ಅಂಗಡಿ, ಎಲೆಕ್ಟ್ರಿಕಲ್, ಜ್ಯುವೆಲ್ಲರಿ ಹೀಗೆ ಅನೇಕ ಅಂಗಡಿ ಮುಂಗಟ್ಟುಗಳು ತೆರೆದು ವ್ಯಾಪಾರ ಮಾಡುತ್ತಿವೆ. ಇದರಿಂದ ಜನರ ಸಂಚಾರವೂ ಜಾಸ್ತಿಯಾದಂತಾಗಿದೆ. ಪೊಲೀಸ್ ಇಲಾಖೆ ಕಲಬುರಗಿ ರಸ್ತೆ, ಬಸ್ ನಿಲ್ದಾಣ, ಪೊಲೀಸ್ ಠಾಣೆ ಬಳಿ ಜನರನ್ನು ತಡೆಯುವ ಯತ್ನ ನಡೆಸಿದೆಯಾದರೂ ಪ್ರತಿನಿತ್ಯ ಜನಸಂದಣಿ ಹೆಚ್ಚುತ್ತಿದೆಯೇ ಹೊರತು ಕಡಿಮೆಯಾಗುತ್ತಿಲ್ಲ.

ಲಾಕ್​ಡೌನ್ ಸಡಿಲಿಕೆಯಿಂದಾಗಿ ಪಟ್ಟಣದಲ್ಲಿ ಮನಬಂದಂತೆ ಜಮಾಯಿಸತೊಡಗಿದ ಜನ

ಇನ್ನು ಅನವಶ್ಯಕವಾಗಿ ತೆರೆಯುತ್ತಿರುವ ಅಂಗಡಿಗಳನ್ನು ಮುಚ್ಚಿಸುವಲ್ಲಿ ಪುರಸಭೆ ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರಾದರೂ ಪೂರ್ಣ ಪ್ರಮಾಣದಲ್ಲಿ ಸಫಲರಾಗಿಲ್ಲ ಎನ್ನಬಹುದು. ಜೊತೆಗೆ ಸರ್ಕಾರಿ ಆಸ್ಪತ್ರೆಗಳಿಗೆ ಬರುವ ರೋಗಿಗಳ ಸಂಖ್ಯೆಯೂ ಹೆಚ್ಚಾಗುತ್ತಿದ್ದು, ಬಿಸಿಲಲ್ಲೇ ಸಾಲುಗಟ್ಟಿ ನಿಲ್ಲುವಂತಹ ಪರಿಸ್ಥಿತಿ ಇದೆ.

ಇನ್ನು ಆಸ್ಪತ್ರೆ ವತಿಯಿಂದ ಟೆಂಟ್ ಅಳವಡಿಸಬೇಕೆಂಬುದು ರೋಗಿಗಳ ಆಗ್ರಹವಾಗಿದೆ.

ABOUT THE AUTHOR

...view details