ಕರ್ನಾಟಕ

karnataka

ETV Bharat / state

ಡಿಎನ್​ಎ ಆಧರಿಸಿ ಸಿಎಎ ಜಾರಿಗೊಳಿಸಿ... ಕಲಬುರಗಿಯಲ್ಲಿ ಪ್ರತಿಭಟನಾಕಾರರ ಒತ್ತಾಯ..! - kalaburagi latest news

ಡಿಎನ್​ಎ ಆಧರಿಸಿ ಸಿಎಎ‌, ಎನ್​ಆರ್​ಸಿ‌ ಜಾರಿಗೊಳಿಸುವಂತೆ ಒತ್ತಾಯಿಸಿ ಹಾಗೂ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಬಹುಜನ ಕ್ರಾಂತಿ ಮೋರ್ಚಾ ಹಾಗೂ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ ‌ನಡೆಸಲಾಯಿತು.

Implement CAA Based on DNA...Kalaburagi protest!
ಡಿಎನ್​ಎ ಆಧರಿಸಿ ಸಿಎಎ ಜಾರಿಗೊಳಿಸಿ...ಕಲಬುರಗಿಯಲ್ಲಿ ಪ್ರತಿಭಟನಾಕಾರರ ಒತ್ತಾಯ!

By

Published : Jan 29, 2020, 6:49 PM IST

ಕಲಬುರಗಿ: ಡಿಎನ್​ಎ ಆಧರಿಸಿ ಸಿಎಎ‌, ಎನ್​ಆರ್​ಸಿ‌ ಜಾರಿಗೊಳಿಸುವಂತೆ ಒತ್ತಾಯಿಸಿ ಹಾಗೂ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನಾ ಮೆರವಣಿಗೆ ‌ನಡೆಸಲಾಯಿತು.

ಡಿಎನ್​ಎ ಆಧರಿಸಿ ಸಿಎಎ ಜಾರಿಗೊಳಿಸಿ...ಕಲಬುರಗಿಯಲ್ಲಿ ಪ್ರತಿಭಟನಾಕಾರರ ಒತ್ತಾಯ!

ಬಹುಜನ ಕ್ರಾಂತಿ ಮೋರ್ಚಾ ಹಾಗೂ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ನಗರದ ಸರ್ದಾರ್ ವಲ್ಲಭಬಾಯಿ ಪಟೇಲ ವೃತ್ತದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದ ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ಸರ್ಕಾರ ಅಸಾಂವಿಧಾನಿಕ ಆಡಳಿತ ನಡೆಸುವ ಮೂಲಕ ದೇಶದಲ್ಲಿ ಅರಾಜಕತೆ ಹುಟ್ಟು ಹಾಕುತ್ತಿದೆ ಎಂದು ಆರೋಪಿಸಿದರು. ಕೊಡಲೇ, ಜಾರಿಗೆ ತಂದಿರುವ ಅಸಾಂವಿಧಾನಿಕ ಪೌರತ್ವ ಕಾಯ್ದೆಯನ್ನು ರದ್ದುಪಡಿಸಿ ಡಿಎನ್​ಎ ಆಧಾರಿತ ಸಿಎಎ, ಎನ್​ಆರ್​ಸಿ, ಎನ್​ಪಿಆರ್ ಅನ್ನು ಜಾರಿಗೆ ತರುವಂತೆ ಆಗ್ರಹಿಸಿದರು.

ABOUT THE AUTHOR

...view details