ಕರ್ನಾಟಕ

karnataka

ETV Bharat / state

ಅಫಜಲಪುರದಲ್ಲಿ ಅಕ್ರಮ ನಾಡ ಪಿಸ್ತೂಲ್ ವಶ: ಆರೋಪಿ ಎಸ್ಕೇಪ್ - pistol seizure in kalburgi

ಅಕ್ರಮ ನಾಡ ಪಿಸ್ತೂಲ್ ಹೊಂದಿದ್ದ ಆರೋಪಿಯನ್ನು ಬಂಧಿಸುವ ವೇಳೆ ಕಾಂಪೌಂಡ್ ಜಿಗಿದು ಪರಾರಿಯಾದ ಘಟನೆ ಅಫಜಲಪುರ  ಬಸ್​ಸ್ಟ್ಯಾಂಡ್​ ಬಳಿ ನಡೆದಿದೆ‌.

ಅಫಜಲಪುರದಲ್ಲಿ ಅಕ್ರಮ ನಾಡ ಪಿಸ್ತೂಲ್ ವಶ: ಆರೋಪಿ ಎಸ್ಕೇಪ್

By

Published : Oct 29, 2019, 12:41 PM IST

ಕಲಬುರಗಿ: ಅಕ್ರಮ ನಾಡ ಪಿಸ್ತೂಲ್ ಹೊಂದಿದ್ದ ಆರೋಪಿಯನ್ನು ಬಂಧಿಸುವ ವೇಳೆ ಕಾಂಪೌಂಡ್ ಜಿಗಿದು ಪರಾರಿಯಾದ ಘಟನೆ ಅಫಜಲಪುರ ಬಸ್​ಸ್ಟ್ಯಾಂಡ್​ ಬಳಿ ನಡೆದಿದೆ‌.

ಅಬ್ದುಲ್ ಖಾದರ್ ಪರಾರಿಯಾದ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ. ಈತನ ಚಲನ ವಲನಗಳಿಂದ ಅನುಮಾನಗೊಂಡು ವಿಚಾರಣೆ ಮಾಡಲು ಪೊಲೀಸರು ಮುಂದಾದಾಗ ಕಾಂಪೌಂಡ್ ಹಾರಿ ಪರಾರಿಯಾಗಿದ್ದಾನೆ. ಪರಾರಿಯಾಗುವಾಗ ಆತನ ಬಳಿ ಇದ್ದ ನಾಡ ಪಿಸ್ತೂಲ್ ಕೆಳಗೆ ಬಿದ್ದಿದೆ. ಸದ್ಯ 1 ಪಿಸ್ತೂಲ್, ಹಾಗೂ 1 ಜೀವಂತ ಗುಂಡನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ತೆಲೆ ಮೆರೆಸಿಕೊಂಡ ಆರೋಪಿಯ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ಈ ಕುರಿತು ಅಫಜಲಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details