ಕಲಬುರಗಿ :ಹೈದರಾಬಾದ್ ಕರ್ನಾಟಕಕ್ಕೆ ಏಮ್ಸ್ ಸೇರಿದಂತೆ ವಿವಿಧ ಅವಶ್ಯಕ ಯೋಜನೆಗಳನ್ನು ನೀಡದೇ ಅನ್ಯಾಯ ಮಾಡಲಾಗುತ್ತಿದೆ ಎಂದು ಹೈದರಾಬಾದ್ ಕರ್ನಾಟಕ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಅಮರನಾಥ ಪಾಟೀಲ್ ಕಿಡಿಕಾರಿದ್ದಾರೆ.
ಈ ಈಟಿವಿ ಭಾರತದೊಂದಿಗೆ ಮಾತನಾಡಿದ ಅವರು, ರಾಜ್ಯ ಹಾಗೂ ಕೇಂದ್ರ ಸರ್ಕಾರದಿಂದ ಹೈದ್ರಾಬಾದ್ ಕರ್ನಾಟಕ ಭಾಗಕ್ಕೆ ಪದೇಪದೆ ಅನ್ಯಾಯವಾಗುತ್ತಿದೆ. ಸಿಎಂ ಬಿ ಎಸ್ಯಡಿಯೂರಪ್ಪನವರು ಘೋಷಿಸಿದಂತೆ ಏಮ್ಸ್ ಕಲಬುರಗಿಗೆ ತರದೇ, ಹುಬ್ಬಳ್ಳಿ-ಧಾರವಾಡಗೆ ಸ್ಥಳಾಂತರಿಸಲಾಗಿದೆ.
ಜೊತೆಗೆ ಕಲಬುರಗಿಗೆ ಇಕೋ ಫ್ರೆಂಡ್ಲಿ ಕೈಗಾರಿಕೆ ಸಹ ನೀಡದೇ ಅನ್ಯಾಯ ಮಾಡಲಾಗಿದೆ. ಬರೀ ಧೂಳು, ಹೊಗೆ ತರುವ ಸಿಮೆಂಟ್ ಮತ್ತು ಥರ್ಮಲ್ ವಿದ್ಯುತ್ ಯೋಜನೆಗಳನ್ನು ಇಲ್ಲಿ ಜಾರಿಗೆ ತರಲಾಗಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.