ಕರ್ನಾಟಕ

karnataka

By

Published : Feb 28, 2021, 12:47 PM IST

ETV Bharat / state

ಕಲ್ಯಾಣ​ ಕರ್ನಾಟಕ ಭಾಗಕ್ಕೆ ಪದೇಪದೆ ಅನ್ಯಾಯ : ಅಮರನಾಥ ಪಾಟೀಲ್ ಆಕ್ರೋಶ

ಮುಂಬರುವ ಬಜೆಟ್​​​ನಲ್ಲಿ ಇಕೋ ಫ್ರೆಂಡ್ಲಿ ಯೋಜನೆಗಳ ಜಾರಿಗೆ ಕ್ರಮ ಕೈಗೊಳ್ಳಬೇಕು. ಸ್ವತಃ ಸಿಎಂ ಘೋಷಿಸಿದಂತೆ ಕಲಬುರಗಿಗೆ ಕೈ ತಪ್ಪಿರುವ ಏಮ್ಸ್ ಇಲ್ಲಿಯೇ ಸ್ಥಾಪಿಸಲು ಬಜೆಟ್​​ನಲ್ಲಿ ನಿರ್ಣಯ ಕೈಗೊಳ್ಳಬೇಕು. ಕಲಬುರಗಿ ರೈಲ್ವೆ ವಲಯ ಸ್ಥಾಪನೆಗೂ ರಾಜ್ಯದಿಂದ ಹಣ ನೀಡಬೇಕು..

HKCC President Amarnath Patil
ಹೆಚ್​​ಕೆಸಿಸಿ ಅಧ್ಯಕ್ಷ ಅಮರನಾಥ ಪಾಟೀಲ್

ಕಲಬುರಗಿ :ಹೈದರಾಬಾದ್ ಕರ್ನಾಟಕಕ್ಕೆ ಏಮ್ಸ್ ಸೇರಿದಂತೆ ವಿವಿಧ ಅವಶ್ಯಕ ಯೋಜನೆಗಳನ್ನು ನೀಡದೇ ಅನ್ಯಾಯ ಮಾಡಲಾಗುತ್ತಿದೆ ಎಂದು ಹೈದರಾಬಾದ್ ಕರ್ನಾಟಕ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಅಮರನಾಥ ಪಾಟೀಲ್ ಕಿಡಿಕಾರಿದ್ದಾರೆ.

ಕಲ್ಯಾಣ​ ಕರ್ನಾಟಕ ಭಾಗಕ್ಕೆ ಪದೇಪದೆ ಅನ್ಯಾಯ ಎಸಗಲಾಗುತ್ತಿದೆ..

ಈ ಈಟಿವಿ ಭಾರತದೊಂದಿಗೆ ಮಾತನಾಡಿದ ಅವರು, ರಾಜ್ಯ ಹಾಗೂ ಕೇಂದ್ರ ಸರ್ಕಾರದಿಂದ ಹೈದ್ರಾಬಾದ್​ ಕರ್ನಾಟಕ ಭಾಗಕ್ಕೆ ಪದೇಪದೆ ಅನ್ಯಾಯವಾಗುತ್ತಿದೆ. ಸಿಎಂ ಬಿ ಎಸ್​ಯಡಿಯೂರಪ್ಪನವರು ಘೋಷಿಸಿದಂತೆ ಏಮ್ಸ್ ಕಲಬುರಗಿಗೆ ತರದೇ, ಹುಬ್ಬಳ್ಳಿ-ಧಾರವಾಡಗೆ ಸ್ಥಳಾಂತರಿಸಲಾಗಿದೆ.

ಜೊತೆಗೆ ಕಲಬುರಗಿಗೆ ಇಕೋ ಫ್ರೆಂಡ್ಲಿ ಕೈಗಾರಿಕೆ ಸಹ ನೀಡದೇ ಅನ್ಯಾಯ ಮಾಡಲಾಗಿದೆ. ಬರೀ ಧೂಳು, ಹೊಗೆ ತರುವ ಸಿಮೆಂಟ್ ಮತ್ತು ಥರ್ಮಲ್ ವಿದ್ಯುತ್ ಯೋಜನೆಗಳನ್ನು ಇಲ್ಲಿ ಜಾರಿಗೆ ತರಲಾಗಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಓದಿ:ಶಿಕ್ಷಣ ಸಂಸ್ಥೆಗಳ ಖಾಲಿ ಹುದ್ದೆ ಭರ್ತಿಗೆ ಸಮ್ಮತಿ : ಸಿಎಂಗೆ ಧನ್ಯವಾದ ಸಲ್ಲಿಸಿದ ಸುರೇಶ್ ಕುಮಾರ್

ಹೀಗಾಗಿ, ಮುಂಬರುವ ಬಜೆಟ್​​​ನಲ್ಲಿ ಇಕೋ ಫ್ರೆಂಡ್ಲಿ ಯೋಜನೆಗಳ ಜಾರಿಗೆ ಕ್ರಮ ಕೈಗೊಳ್ಳಬೇಕು. ಸ್ವತಃ ಸಿಎಂ ಘೋಷಿಸಿದಂತೆ ಕಲಬುರಗಿಗೆ ಕೈ ತಪ್ಪಿರುವ ಏಮ್ಸ್ ಇಲ್ಲಿಯೇ ಸ್ಥಾಪಿಸಲು ಬಜೆಟ್​​ನಲ್ಲಿ ನಿರ್ಣಯ ಕೈಗೊಳ್ಳಬೇಕು. ಕಲಬುರಗಿ ರೈಲ್ವೆ ವಲಯ ಸ್ಥಾಪನೆಗೂ ರಾಜ್ಯದಿಂದ ಹಣ ನೀಡಬೇಕು.

ಸ್ಪೆಷಲ್ ಕಾರಿಡಾರ್ ಯೋಜನೆ ಸ್ಥಾಪನೆಗೂ ಬಜೆಟ್​​ನಲ್ಲಿ ಕ್ರಮ ಕೈಗೊಳ್ಳಬೇಕು. ಕಲ್ಯಾಣ ಕರ್ನಾಟಕಕ್ಕೆ ಆಗಿರುವ ಅನ್ಯಾಯ ಸರಿಪಡಿಸಲು ಬಜೆಟ್​​ನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಅಮರನಾಥ ಪಾಟೀಲ ಆಗ್ರಹಿಸಿದ್ದಾರೆ.

ABOUT THE AUTHOR

...view details