ಕರ್ನಾಟಕ

karnataka

By

Published : Oct 14, 2020, 1:31 PM IST

ETV Bharat / state

ಮೊರಾರ್ಜಿ ಶಾಲೆಗೆ ಕಾಗಿಣಾ ಜಲದಿಗ್ಬಂಧನ: ಕೊಠಡಿಗಳಲ್ಲೇ ಸಿಲುಕಿದ ಸಿಬ್ಬಂದಿ

ಕಾಗಿಣಾ ನದಿ ತುಂಬಿ ಹರಿಯುತ್ತಿರುವುದರಿಂದ ಪ್ರವಾಹ ಭೀತಿ ಎದುರಾಗಿದೆ. ಪರಿಣಾಮ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ನದಿ ನೀರು ಸುತ್ತುವರೆದಿದ್ದು, ಶಾಲೆಯಲ್ಲಿ ಸಿಲುಕಿರುವ ಸಿಬ್ಬಂದಿ ಕಂಗಾಲಾಗಿದ್ದಾರೆ.

Heavy rain Sedam
ಮೊರಾರ್ಜಿ ಶಾಲೆ

ಸೇಡಂ(ಕಲಬುರಗಿ): ತಾಲೂಕಿನ ಸಂಗಾವಿ ಗ್ರಾಮದ ಸಮೀಪದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಸುತ್ತಲೂ ಕಾಗಿಣಾ ನದಿ ನೀರು ಸುತ್ತುವರೆದಿದ್ದು, ಶಾಲೆಯಲ್ಲಿ ಸಿಲುಕಿರುವ ಸಿಬ್ಬಂದಿ ಕಂಗಾಲಾಗಿದ್ದಾರೆ.

ಮೊರಾರ್ಜಿ ಶಾಲೆಗೆ ಕಾಗಿಣಾ ಜಲದಿಗ್ಬಂಧನ

ವಸತಿ ಶಾಲೆ ಸುತ್ತಲೂ ಹತ್ತಾರು ಅಡಿ ನೀರು ಜಮಾವಣೆಯಾಗಿದೆ. ಪಕ್ಕದಲ್ಲೇ ಕಾಗಿಣಾ ನದಿ ಹರಿಯುತ್ತಿರುವ ಪರಿಣಾಮ ಶಾಲೆ‌ ಜಲ ದಿಗ್ಬಂಧನಕ್ಕೆ ಒಳಗಾಗಿದೆ. ದಾರಿ ಕಾಣದೇ ತಬ್ಬಿಬ್ಬಾಗಿರುವ ಸಿಬ್ಬಂದಿ ಸಹಾಯಕ್ಕಾಗಿ ಮೊರೆಯಿಡುತ್ತಿದ್ದಾರೆ.

ABOUT THE AUTHOR

...view details