ಕರ್ನಾಟಕ

karnataka

280 ಕಿ.ಮೀ. ದೂರ ಕಾಲ್ನಡಿಗೆಯಲ್ಲೇ ಕಲಬುರಗಿಗೆ ಬಂದ ಕಾರ್ಮಿಕ ಆಸ್ಪತ್ರೆಗೆ ದಾಖಲು

By

Published : Apr 27, 2020, 3:23 PM IST

ಲಾಕ್‌ಡೌನ್ ಹಿನ್ನೆಲೆ ವಾಹನ ಸಂಚಾರ ವ್ಯವಸ್ಥೆ ಇಲ್ಲದೆ 38 ವರ್ಷದ ವ್ಯಕ್ತಿಯೊಬ್ಬ ಹೈದರಾಬಾದ್​ನಿಂದ ಸುಮಾರು 280 ಕಿ.ಮೀ. ದೂರ ನಡೆದುಕೊಂಡು ನಿನ್ನೆ ರಾತ್ರಿ ಕಲಬುರಗಿಯ ಗಂಗಾನಗರದಲ್ಲಿರುವ ತಮ್ಮ ನಿವಾಸಕ್ಕೆ ಆಗಮಿಸಿದ್ದಾನೆ. ಈ ವಿಷಯ ಅರಿತ ಆರ್​ಜಿ ನಗರ ಪೊಲೀಸ್ ಠಾಣೆಯ ಇನ್ಸಪೆಕ್ಟರ್ ಅರುಣ ಹಾಗೂ ಸಿಬ್ಬಂದಿ ವ್ಯಕ್ತಿಯ ಮನೆಗೆ ತೆರಳಿ ವಿಚಾರಣೆ ನಡೆಸಿದ್ದಾರೆ.

health department
280 ಕಿ.ಮಿ ಕ್ರಮಿಸಿ ಮನೆಗೆ ಬಂದ ಕಾರ್ಮಿಕ

ಕಲಬುರಗಿ: ತೆಲಂಗಾಣದ ಹೈದರಾಬಾದ್​ನಿಂದ ಜಿಲ್ಲೆಗೆ ಕಾಲ್ನಡಿಗೆಯಲ್ಲಿ ಆಗಮಿಸಿದ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲು, ಸರಿಯಾದ ಸಮಯಕ್ಕೆ ಆ್ಯಂಬುಲೆನ್ಸ್​ ಸೌಲಭ್ಯ ದೊರಕಿಸಿಕೊಡುವಲ್ಲಿ ಆರೋಗ್ಯ ಇಲಾಖೆ ವಿಫಲವಾಗಿದೆ ಎಂಬ ಆರೋಪ ಕೇಳಿಬಂದಿದೆ.

ಲಾಕ್‌ಡೌನ್ ಹಿನ್ನೆಲೆ ವಾಹನ ಸಂಚಾರ ವ್ಯವಸ್ಥೆ ಇಲ್ಲದೆ 38 ವರ್ಷದ ವ್ಯಕ್ತಿಯೊಬ್ಬ ಹೈದರಾಬಾದ್​ನಿಂದ ಸುಮಾರು 280 ಕಿ.ಮೀ ದೂರ ನಡೆದುಕೊಂಡು ನಿನ್ನೆ ರಾತ್ರಿ ಗಂಗಾನಗರದಲ್ಲಿರುವ ತಮ್ಮ ನಿವಾಸಕ್ಕೆ ಆಗಮಿಸಿದ್ದಾನೆ. ಈ ವಿಷಯ ಅರಿತ ನಗರದ ಆರ್​ಜಿ ನಗರ ಪೊಲೀಸ್ ಠಾಣೆಯ ಇನ್ಸ್​ಪೆಕ್ಟರ್ ಅರುಣ ಹಾಗೂ ಸಿಬ್ಬಂದಿ ವ್ಯಕ್ತಿಯ ಮನೆಗೆ ತೆರಳಿ ವಿಚಾರಣೆ ನಡೆಸಿದ್ದಾರೆ.

ತಾನೊಬ್ಬ ಕೂಲಿ ಕಾರ್ಮಿಕನಾಗಿದ್ದು, ಹೈದರಾಬಾದ್​ನಿಂದ ಕಾಲ್ನಡಿಗೆ ಮೂಲಕ ಮನೆಗೆ ಬಂದಿರುವುದಾಗಿ ಹೇಳಿದ್ದಾನೆ. ಆಗ ಪೊಲೀಸರು ಆ್ಯಂಬುಲೆನ್ಸ್​ಗೆ ಕರೆ ಮಾಡಿದ್ದಾರೆ. ಒಂದು ಗಂಟೆಯಾದರೂ ಅಂಬ್ಯುಲೆನ್ಸ್​ ಬಂದಿಲ್ಲ, ಆರೋಗ್ಯ ಇಲಾಖೆ ಟಿಹೆಚ್​ಒಗೆ ಕರೆ ಮಾಡಿದ್ರೆ ರಾತ್ರಿ ವೇಳೆ ಹೇಗೆ ಬರೋದು ಎಂದು ಬೇಜವಾಬ್ದಾರಿಯಾಗಿ ಮಾತನಾಡಿದ್ದಾರೆಂಬ ಆರೋಪ ಸ್ಥಳೀಯರಿಂದ ಕೇಳಿ ಬಂದಿದೆ.

280 ಕಿ.ಮೀ. ಕ್ರಮಿಸಿ ಮನೆಗೆ ಬಂದ ಕಾರ್ಮಿಕ

ಸುಮಾರು ಒಂದೂವರೆ ಗಂಟೆ ನಂತರ ಸ್ಥಳಕ್ಕೆ ಆ್ಯಂಬುಲೆನ್ಸ್​ ಆಗಮಿಸಿ ವ್ಯಕ್ತಿಯನ್ನು ಜಿಮ್ಸ್ ಆಸ್ಪತ್ರೆಗೆ ಕರೆದೊಯ್ದಿದೆ.

ABOUT THE AUTHOR

...view details