ಕಲಬುರಗಿ:ಮೈತ್ರಿ ಸರ್ಕಾರ ಪತನಗೊಂಡು ಸರ್ಕಾರ ರಚನೆಗೆ ಬಿಜೆಪಿ ಸಿದ್ಧತೆ ನಡೆಸುತ್ತಿದ್ದು, ಸರ್ಕಾರ ರಚನೆಗೂ ಮುನ್ನವೇ ಸಚಿವ ಸ್ಥಾನ ಮತ್ತು ಡಿಸಿಎಂ ಸ್ಥಾನಕ್ಕೆ ಲಾಬಿ ಶುರುವಾಗಿದೆ.
ಮಂತ್ರಿಗಿರಿಗೆ ಲಾಬಿ: ಕಾರಜೋಳಗೆ ಡಿಸಿಎಂ ಪಟ್ಟ ನೀಡಲು ಆಗ್ರಹ - undefined
ಮಾಜಿ ಸಚಿವ ಗೋವಿಂದ ಕಾರಜೋಳ ಅವರನ್ನು ಉಪ ಮುಖ್ಯಮಂತ್ರಿ ಮಾಡಬೇಕೆಂದು ಮಾದಿಗ ಮಹಾಸಭಾ ಆಗ್ರಹಿಸಿದೆ.
![ಮಂತ್ರಿಗಿರಿಗೆ ಲಾಬಿ: ಕಾರಜೋಳಗೆ ಡಿಸಿಎಂ ಪಟ್ಟ ನೀಡಲು ಆಗ್ರಹ](https://etvbharatimages.akamaized.net/etvbharat/prod-images/768-512-3943759-thumbnail-3x2-brm.jpg)
ನಾಗರಾಜ ಗುಂಡಗುರ್ತಿ,
ನಾಗರಾಜ ಗುಂಡಗುರ್ತಿ, ರಾಜ್ಯಾಧ್ಯಕ್ಷ, ಅಣ್ಣಾಬಾಹು ಸಾಠೆ ಮಾದಿಗ ಮಹಾಸಭಾ
ಮಾಜಿ ಸಚಿವ ಗೋವಿಂದ ಕಾರಜೋಳ ಅವರನ್ನು ಉಪ ಮುಖ್ಯಮಂತ್ರಿ ಮಾಡಬೇಕೆಂದು ಅಣ್ಣಾಬಾಹು ಸಾಠೆ ಮಾದಿಗ ಮಹಾಸಭಾ ಬಿಜೆಪಿ ಹೈಕಮಾಂಡ್ನ್ನು ಆಗ್ರಹಿಸಿದೆ.
ಕಲಬುರ್ಗಿಯಲ್ಲಿ ಮಾತನಾಡಿದ ಮಹಾಸಭಾದ ರಾಜ್ಯಾಧ್ಯಕ್ಷ ನಾಗರಾಜ ಗುಂಡಗುರ್ತಿ, ಕಳೆದ ಹಲವಾರು ಚುನಾವಣೆಗಳಲ್ಲಿ ಮಾದಿಗ ಸಮುದಾಯ ಬಿಜೆಪಿ ಪಕ್ಷ ಬೆಂಬಲಿಸಿದೆ. ಹೀಗಾಗಿ ಮಾದಿಗ ಸಮುದಾಯಕ್ಕೆ ಸೇರಿದ ಗೋವಿಂದ ಕಾರಜೋಳ ಅವರನ್ನು ಉಪ ಮುಖ್ಯಮಂತ್ರಿ ಮಾಡಿ, ಎಡಗೈ ಸಮಾಜಕ್ಕೆ ನ್ಯಾಯ ಒದಗಿಸಬೇಕೆಂದು ಒತ್ತಾಯಿಸಿದ್ದಾರೆ.