ಕಲಬುರಗಿ: ಪ್ರೀತ್ಸೆ ಎಂದು ಕಿರುಕುಳ ನೀಡುತ್ತಿದ್ದ ಯುವಕನ ಕಿರುಕುಳದಿಂದ ನೊಂದ ಯುವತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕಾಳಗಿ ತಾಲೂಕಿನ ಬುಗಡಿ ತಾಂಡಾದಲ್ಲಿ ನಡೆದಿದೆ.
ಯುವಕನ ಕಿರುಕುಳ ಆರೋಪ: ನೊಂದ ಯುವತಿ ನೇಣು ಬಿಗಿದು ಆತ್ಮಹತ್ಯೆ - ಕಲಬುರಗಿ ಕ್ರೈಮ್ ಲೆಟೆಸ್ಟ್ ನ್ಯೂಸ್
ಕಲಬುರಗಿಯ ಕಾಳಗಿ ತಾಲೂಕಿನ ಬುಗಡಿ ತಾಂಡಾದಲ್ಲಿ ಯುವಕನ ಕಿರುಕುಳಕ್ಕೆ ನೊಂದು ಯುವತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಯುವತಿ ನೇಣಿಗೆ ಶರಣು
ಸರಿತಾ (18) ಆತ್ಮಹತ್ಯೆ ಮಾಡಿಕೊಂಡಿರುವ ಯುವತಿ. ಬುಗಡಿ ತಾಂಡಾ ಗ್ರಾಮದ ಶ್ರೀನಿವಾಸ ಎಂಬಾತ ಯುವತಿಯನ್ನು ಚುಡಾಯಿಸುತ್ತಿದ್ದು, ಆಕೆಯ ಜೊತೆಯಿರುವ ತನ್ನ ಫೋಟೋಗಳನ್ನು ಎಡಿಟ್ ಮಾಡಿ ಸಾಮಾಜಿಕ ತಾಣದಲ್ಲಿ ಹರಿಬಿಟ್ಟಿದ್ದನಂತೆ. ಇದರಿಂದ ನೊಂದ ಯುವತಿ ಪತ್ರ ಬರೆದಿಟ್ಟು ನೇಣಿಗೆ ಶರಣಾಗಿದ್ದಾಳೆ.
ಈ ಘಟನೆ ನಂತರ ಆರೋಪಿ ಶ್ರೀನಿವಾಸ ಪರಾರಿಯಾಗಿದ್ದಾನೆ. ಈ ಸಂಬಂಧ ರಟಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.