ಕರ್ನಾಟಕ

karnataka

ETV Bharat / state

ತಾಲೂಕು ಆಡಳಿತದ ಜೊತೆ  ಮಾಜಿ ಸಚಿವ ಶರಣಪ್ರಕಾಶ ಪಾಟೀಲ ಸಭೆ - ಮಾಜಿ ಸಚಿವ ಡಾ. ಶರಣಪ್ರಕಾಶ ಪಾಟೀಲ

ಕೊರೊನಾ ತಡೆಯುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿರಬೇಕು. ಮನೆಯಲ್ಲೇ ಇದ್ದು ಸೋಂಕು ಹರಡುವಿಕೆ ತಡೆಯಬೇಕು. ರೋಗ ನಿರೋಧಕ ಶಕ್ತಿ ವೃದ್ಧಿಸುವ ಆಹಾರ ಕ್ರಮ ಅನುಸರಿಸಬೇಕು ಎಂದು ಮಾಜಿ ಸಚಿವ ಡಾ. ಶರಣಪ್ರಕಾಶ ಪಾಟೀಲ ಸಲಹೆ ನೀಡಿದರು.

By

Published : Apr 16, 2020, 5:01 PM IST

ಸೇಡಂ:ಕೊರೊನಾ ಹಾವಳಿಯ ಕುರಿತು ಮಾಜಿ ಸಚಿವ ಡಾ.ಶರಣಪ್ರಕಾಶ ಪಾಟೀಲ ತಾಲೂಕು ಆಡಳಿತದ ಜೊತೆಗೆ ಸಭೆ ನಡೆಸಿ ಮಾಹಿತಿ ಪಡೆದುಕೊಂಡರು.

ಗುರುವಾರ ಬೆಳಗ್ಗೆ ಸಹಾಯಕ ಆಯುಕ್ತರ ಕಚೇರಿಗೆ ಭೇಟಿ ನೀಡಿದ ಅವರು, ಎಸಿ ರಮೇಶ ಕೋಲಾರ ಹಾಗೂ ತಾಲೂಕು ಆರೋಗ್ಯಾಧಿಕಾರಿ ರಾಕೇಶ ಕಾಂಬ್ಳೆ ಅವರಿಂದ ಕೊರೊನಾ ಜಾಗೃತಿ ಬಗ್ಗೆ ಮಾಹಿತಿ ಪಡೆದುಕೊಂಡರು.

ಅಲ್ಲದೆ ಬಡವರಿಗೆ ಪಡಿತರ ಸರಬರಾಜು ಮತ್ತು ನಿರ್ಗತಿಕರಿಗೆ ಊಟದ ವ್ಯವಸ್ಥೆ ಬಗ್ಗೆ ವಿಶೇಷ ಗಮನಹರಿಸುವಂತೆ ಹೇಳಿದರು.

ABOUT THE AUTHOR

...view details