ಕಲಬುರಗಿ: ಪತ್ರಕರ್ತರಿಗೆ ಮಾನಹಾನಿ ಮಾಡಿರುವುದಕ್ಕೆ ಸಂಬಂಧಿಸಿದಂತೆ ಆರ್ಟಿಐ ಕಾರ್ಯಕರ್ತ ಸಿದ್ರಾಮಯ್ಯ ಎಸ್.ಹಿರೇಮಠ ಅಲಿಯಾಸ್ ಸಿದ್ದು ಹಿರೇಮಠ ವಿರುದ್ಧ ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.
ಪತ್ರಕರ್ತರು ಲೂಟಿಕೋರರು, ಭ್ರಷ್ಟರು, ಇವರೇನು ಸಾಚಾನಾ? ಎಂಬಿತ್ಯಾದಿ ಮಾನಹಾನಿ, ಅವಹೇಳನಕಾರಿ, ಮಾನಸಿಕ ಹಿಂಸೆ ನೀಡುವಂತಹ ಹೇಳಿಕೆಗಳನ್ನು ವಾಟ್ಸ್ ಆ್ಯಪ್ ಮತ್ತು ಫೇಸ್ಬುಕ್ನಲ್ಲಿ ಇವರು ನಿರಂತರವಾಗಿ ಪೋಸ್ಟ್ ಮಾಡುತ್ತಾ ಬಂದಿದ್ದಾರೆ. ಈ ಕುರಿತಾಗಿ ದಾಖಲೆಗಳ ಸಮೇತ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ದೂರು ನೀಡಲಾಗಿತ್ತು. ಈ ದೂರು ಪರಿಗಣಿಸಿದ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡಿದ್ದಾರೆ.