ಕರ್ನಾಟಕ

karnataka

By

Published : Jul 11, 2019, 1:09 PM IST

ETV Bharat / state

ಬ್ಯಾಂಕ್​ ಖಾತೆಗೆ ಆಧಾರ್​ ಲಿಂಕ್​ ಮಾಡುವಂತೆ ರೈತರಿಗೆ ಡಿಸಿ ಸೂಚನೆ

ಬೆಂಬಲ ಬೆಲೆ ಯೋಜನೆಯಡಿ 2018-19ನೇ ಸಾಲಿನಲ್ಲಿ ಎಫ್​ಎಕ್ಯೂ ಗುಣಮಟ್ಟದ ತೊಗರಿ ಕಾಳನ್ನು ಸರ್ಕಾರಕ್ಕೆ ಮಾರಾಟ ಮಾಡಿಯೂ, ಇದುವರೆಗೂ ಹಣ ಜಮೆ ಆಗದೇ ಇರುವ ರೈತರು ತಮ್ಮ ಅಗತ್ಯ ದಾಖಲೆಗಳನ್ನು ಬ್ಯಾಂಕ್ ಖಾತೆಗೆ ಲಿಂಕ್​ ಮಾಡಿ, ಅದರ ಪ್ರತಿಯನ್ನ ಖರೀದಿ ಕೇಂದ್ರದ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸಲ್ಲಿಸಬೇಕು ಎಂದು ಡಿಸಿ ವೆಂಕಟೇಶ್​ ಕುಮಾರ್​ ತಿಳಿಸಿದ್ದಾರೆ.

ರೈತರಿಗೆ ಬ್ಯಾಂಕ್​ ಖಾತೆಗೆ ಆಧಾರ್​ ಲಿಂಕ್​ ಮಾಡುವಂತೆ ಜಿಲ್ಲಾಧಿಕಾರಿ ಸೂಚನೆ

ಕಲಬುರಗಿ:ಬೆಂಬಲ ಬೆಲೆ ಯೋಜನೆಯಡಿ 2018-19ನೇ ಸಾಲಿನಲ್ಲಿ ಎಫ್​ಎಕ್ಯೂ ಗುಣಮಟ್ಟದ ತೊಗರಿ ಕಾಳನ್ನು ಸರ್ಕಾರಕ್ಕೆ ಮಾರಾಟ ಮಾಡಿಯೂ, ಇದುವರೆಗೆ ಹಣ ಜಮೆ ಆಗದೇ ಇರುವ ರೈತರು ತಮ್ಮ ಅಗತ್ಯ ದಾಖಲೆಗಳನ್ನು ಬ್ಯಾಂಕ್ ಖಾತೆಗೆ ಲಿಂಕ್​ ಮಾಡಿ, ಅದರ ಪ್ರತಿಯನ್ನ ಖರೀದಿ ಕೇಂದ್ರದ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸಲ್ಲಿಸಬೇಕು ಎಂದು ಡಿಸಿ ವೆಂಕಟೇಶ್​ ಕುಮಾರ್​ ತಿಳಿಸಿದ್ದಾರೆ.

ರೈತರಿಗೆ ಬ್ಯಾಂಕ್​ ಖಾತೆಗೆ ಆಧಾರ್​ ಲಿಂಕ್​ ಮಾಡುವಂತೆ ಜಿಲ್ಲಾಧಿಕಾರಿ ಸೂಚನೆ

ಇದಲ್ಲದೇ, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳಿ ಮತ್ತು ತೊಗರಿ ಅಭಿವೃದ್ಧಿ ಮಂಡಳಿ ಕಾರ್ಯಾಲಯಕ್ಕೂ, ಅಗತ್ಯ ದಾಖಲೆಗಳನ್ನು ಸಲ್ಲಿಸಬಹುದು. ರೈತರಿಗೆ ತೊಗರಿ ಮಾರಾಟದ ಹಣವನ್ನು ಆಧಾರ್‌ ಸಂಖ್ಯೆ ಜೋಡಣೆಯಾಗಿರುವ ಬ್ಯಾಂಕ್ ಖಾತೆಗೆ ಮಾತ್ರ ಪಾವತಿಸಲಾಗುತ್ತಿದೆ. ಜಿಲ್ಲೆಯ ಕೆಲವು ರೈತರ ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆಯಾಗದ ಕಾರಣ ಹಣ ಜಮೆ ಆಗಿರುವುದಿಲ್ಲ.

ಆದ್ದರಿಂದ ಹಣ ಜಮೆ ಆಗಿರದ ರೈತರು ಕೂಡಲೆ ತಮ್ಮ ಬ್ಯಾಂಕ್ ಖಾತೆಯ ಪಾಸ್ ಬುಕ್​ ಪ್ರತಿ, ಖರೀದಿ ಕೇಂದ್ರದ ತೊಗರಿ ಖರೀದಿ ಬಿಲ್ಲು, ಆಧಾರ್​ ಪ್ರತಿ ದಾಖಲೆಗಳನ್ನು ಬ್ಯಾಂಕ್ ಖಾತೆಗೆ ಜೋಡಣೆ ಮಾಡಲು ಖರೀದಿ ಕೇಂದ್ರದ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸಲ್ಲಿಸುವಂತೆ ಸೂಚಿಸಿದರು.

For All Latest Updates

TAGGED:

Kalburgi

ABOUT THE AUTHOR

...view details