ಕರ್ನಾಟಕ

karnataka

ETV Bharat / state

ಶಹಾಬಾದ್​ನಲ್ಲಿ ಕಾಂಗ್ರೆಸ್​ ಮುಖಂಡನ ಮೇಲೆ ಮಾರಣಾಂತಿಕ ಹಲ್ಲೆ - ಶಹಾಬಾದ್ ಕಾಂಗ್ರೆಸ್​ ಮುಖಂಡನ ಮೇಲೆ ಹಲ್ಲೆ

ಕಾಂಗ್ರೆಸ್​ ಮುಖಂಡರೊಬ್ಬರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿರುವ ಘಟನೆ ಶಹಾಬಾದ ಪಟ್ಟಣದಲ್ಲಿ ನಡೆದಿದೆ. ಶಹಾಬಾದ್ ನಗರಸಭೆ ಮಾಜಿ ಅಧ್ಯಕ್ಷ  ಗಿರೀಶ್ ಕಂಬಾನೂರ ಹಲ್ಲೆಗೊಳಗಾಗಿದ್ದಾರೆ.

ಗಿರೀಶ್ ಕಂಬಾನೂರ
ಗಿರೀಶ್ ಕಂಬಾನೂರ

By

Published : Dec 12, 2019, 9:26 AM IST

ಕಲಬುರಗಿ:ಕಾಂಗ್ರೆಸ್​ ಮುಖಂಡರೊಬ್ಬರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿರುವ ಘಟನೆ ಶಹಾಬಾದ ಪಟ್ಟಣದಲ್ಲಿ ನಡೆದಿದೆ. ಶಹಾಬಾದ್ ನಗರಸಭೆ ಮಾಜಿ ಅಧ್ಯಕ್ಷ ಗಿರೀಶ್ ಕಂಬಾನೂರ ಮೇಲೆ ತಡರಾತ್ರಿ ಪಟ್ಟಣದ ಇಎಸ್ಐ ಆಸ್ಪತ್ರೆ ಬಳಿ ಚಾಕುವಿನಿಂದ ಹಲ್ಲೆ ಮಾಡಲಾಗಿದೆ.

ಕುತ್ತಿಗೆ ಹಾಗೂ ಹೊಟ್ಟೆ ಭಾಗದಲ್ಲಿ ಗಂಭೀರ ಗಾಯಗಳಾಗಿದ್ದು, ಚಿಂತಾಜನಕ ಸ್ಥೀತಿಯಲ್ಲಿರುವ ಗಿರೀಶ್​ನನ್ನು ಕಲಬುರಗಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಳೇ ದ್ವೇಷದ ಹಿನ್ನೆಲೆ ವಿಜಯ್ ಹಳ್ಳಿ ಎಂಬಾತ ಹಲ್ಲೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಶಹಾಬಾದ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

For All Latest Updates

TAGGED:

ABOUT THE AUTHOR

...view details