ಕಲಬುರಗಿ: ಹೊರ ರಾಜ್ಯಗಳಿಂದ ಜಿಲ್ಲೆಗೆ ಸಂಪರ್ಕ ಕಲ್ಪಿಸುವ ಚೆಕ್ ಪೋಸ್ಟ್, ಕೊರೊನಾ ಸೋಂಕಿತರ ರೋಗಿಗಳ ವಾರ್ಡ್ ಹಾಗೂ ಬ್ಯಾರಿಕೇಡ್ ಅಳವಡಿಸಿರುವಲ್ಲಿ ಸಿಸಿಟಿವಿ ಅಳವಡಿಸಲು ಕ್ರಮ ತೆಗೆದುಕೊಳ್ಳುವಂತೆ ಜಿಲ್ಲಾ ಪೊಲೀಸ್ ಇಲಾಖೆಗೆ ಸಂಸ್ ಡಾ. ಉಮೇಶ್ ಜಾಧವ್ ಸೂಚಿಸಿದರು.
ಇಲ್ಲಿನ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಸಭಾಂಗಣದಲ್ಲಿ ನಡೆದ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಶಹಾಬಾದ್ ಹಾಗೂ ಹುಮನಾಬಾದ್ನಿಂದ ಆಗಮಿಸುವ ಚೆಕ್ ಪೋಸ್ಟ್ಗಳನ್ನು ಹೊರತುಪಡಿಸಿ ಎಲ್ಲಾ ಕಡೆ ಎಚ್ಚರಿಕೆ ವಹಿಸಬೇಕು. ಸಿಸಿಟಿವಿಗಳನ್ನು ಅಳವಡಿಸಿ, ಜಿಲ್ಲೆಗೆ ಆಗಮಿಸುವ ವಾಹನಗಳು ಹಾಗೂ ಚಾಲಕರ ಮಾಹಿತಿ ಪರಿಶೀಲಿಸಬೇಕು ಎಂದರು.