ಕಲಬುರಗಿ:ಬೈಕ್ಗೆ ಈಶಾನ್ಯ ಕರ್ನಾಟಕ ಸಾರಿಗೆ ಬಸ್ ಡಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ನಗರದ ರಿಂಗ್ ರೋಡ್ನಲ್ಲಿ ಸಂಭವಿಸಿದೆ.
ಬೈಕ್ಗೆ ಬಸ್ ಡಿಕ್ಕಿ... ಕಲಬುರಗಿಯಲ್ಲಿ ಪ್ರಾಂಶುಪಾಲ ಸಾವು - ಕಲಬುರಗಿ ಅಪಘಾತ ಸುದ್ದಿ
ಬೈಕ್ಗೆ ಈಶಾನ್ಯ ಕರ್ನಾಟಕ ಸಾರಿಗೆ ಬಸ್ ಡಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಕಲಬುರಗಿ ನಗರದ ರಿಂಗ್ ರೋಡ್ನಲ್ಲಿ ಈ ದುರ್ಘಟನೆ ನಡೆದಿದೆ.
![ಬೈಕ್ಗೆ ಬಸ್ ಡಿಕ್ಕಿ... ಕಲಬುರಗಿಯಲ್ಲಿ ಪ್ರಾಂಶುಪಾಲ ಸಾವು](https://etvbharatimages.akamaized.net/etvbharat/prod-images/768-512-4040103-thumbnail-3x2-acci.jpg)
bus-accident-principal-died
ಭಾಲ್ಕಿಯಿಂದ ಬೆಳಗಾವಿ ಕಡೆಗೆ ಹೊರಟಿದ್ದ ಸಾರಿಗೆ ಬಸ್ ರಿಂಗ್ ರೋಡ್ ಉದನೂರು ಕ್ರಾಸ್ ಬಳಿ ಬೈಕ್ಗೆ ಡಿಕ್ಕಿ ಹೊಡೆದಿದೆ. ಅಂಬಿಕಾ ನಗರದ ವಿಠ್ಠಲ್ ಹೂಗಾರ(35) ಮೃತ ಪ್ರಾಂಶುಪಾಲ.
ವಿಠ್ಠಲ್ ಹೂಗಾರ ಅವರು ಅಂಬೇಡ್ಕರ್ ವಸತಿ ಶಾಲೆಯ ಪ್ರಾಂಶುಪಾಲರಾಗಿದ್ದರು ಎನ್ನಲಾಗುತ್ತಿದೆ. ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.