ಕರ್ನಾಟಕ

karnataka

By

Published : Nov 27, 2020, 3:32 PM IST

ETV Bharat / state

ಸಕ್ಕರೆ ಕಾರ್ಖಾನೆಗಳು ದರ ನಿಗದಿ ಮಾಡದಿದ್ದರೆ ಉಗ್ರ ಹೋರಾಟ : ಮಾಜಿ ಶಾಸಕ ಬಿ ಆರ್ ಪಾಟೀಲ ಎಚ್ಚರಿಕೆ

ಎನ್​ಎಸ್​ಎಲ್, ಹವಳಗಾ ರೇಣುಕಾ ಹಾಗೂ ಉಗಾರ್ ಸಕ್ಕರೆ ಕಾರ್ಖಾನೆಗಳು ಉದ್ಧಟತನದಿಂದ ವರ್ತಿಸುತ್ತಿವೆ. ಕಾರ್ಖಾನೆಗಳು ಎಥೆನಾಲ್, ಕಾಕಂಬಿ ಉತ್ಪಾದಿಸಿ ಲಾಭ ಪಡೆಯುತ್ತಿವೆ..

BR Patil urges to fix sugarcane rate
ಮಾಜಿ ಶಾಸಕ ಬಿ.ಆರ್.ಪಾಟೀಲ

ಕಲಬುರಗಿ :ಜಿಲ್ಲಾಧಿಕಾರಿಗಳ ಸೂಚನೆ ಬಳಿಕವೂ ಸಕ್ಕರೆ ಕಾರ್ಖಾನೆಗಳು ದರ ನಿಗದಿ ಮಾಡಿಲ್ಲ ಎಂದು ಶಾಸಕ ಎಂ ವೈ ಪಾಟೀಲ ಹಾಗೂ ಮಾಜಿ ಶಾಸಕ ಬಿ ಆರ್ ಪಾಟೀಲ ಆರೋಪಿಸಿದ್ದಾರೆ.

ನಗರದಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಈಗಾಗಲೇ ಎಫ್​ಆರ್​ಪಿ ದರ ನಿಗದಿಗೊಳಿಸಿದೆ. ಆದರೆ, ಜಿಲ್ಲೆಯ ಸಕ್ಕರೆ ಕಾರ್ಖಾನೆಗಳು ದರ ನಿಗದಿ ಮಾಡದೇ ಕಾರ್ಯಾರಂಭ ಮಾಡಿವೆ. ಈಗಾಗಲೇ ಜಿಲ್ಲಾಧಿಕಾರಿ ದರ ನಿಗದಿಗೆ ಸೂಚಿಸಿದ್ದಾರೆ, ಒಂದು ವಾರ ಕಳೆದರೂ ಕಾರ್ಖಾನೆಗಳು ದರ ನಿಗದಿ ಮಾಡಿಲ್ಲ ಎಂದರು.

ಮಾಜಿ ಶಾಸಕ ಬಿ ಆರ್ ಪಾಟೀಲ

ಇದನ್ನೂ ಓದಿ: ಕಲಬುರಗಿ ಏರ್​ಪೋರ್ಟ್​ಗೆ ವರ್ಷದ ಸಂಭ್ರಮ: 4 ಜಿಲ್ಲೆಗಳನ್ನು ಹಿಂದಿಕ್ಕಿ ಉನ್ನತ ಸ್ಥಾನಕ್ಕೇರಿದ ವಿಮಾನಯಾನ

ಕಲಬುರಗಿಯ ಎನ್​ಎಸ್​ಎಲ್, ಹವಳಗಾ ರೇಣುಕಾ ಹಾಗೂ ಉಗಾರ್ ಸಕ್ಕರೆ ಕಾರ್ಖಾನೆಗಳು ಉದ್ಧಟತನದಿಂದ ವರ್ತಿಸುತ್ತಿವೆ. ಕಾರ್ಖಾನೆಗಳು ಎಥೆನಾಲ್, ಕಾಕಂಬಿ ಉತ್ಪಾದಿಸಿ ಲಾಭ ಪಡೆಯುತ್ತಿವೆ.

ಆದರೆ, ರೈತ ಸಮುದಾಯಕ್ಕೆ ಮಾತ್ರ ಅನ್ಯಾಯ ಮಾಡುತ್ತಿವೆ. ಈಗಲಾದರೂ ಜಿಲ್ಲಾಧಿಕಾರಿಗಳು ತಮ್ಮ ಅಧಿಕಾರ ಬಳಸಿ ಕಾರ್ಖಾನೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಒಂದು ವಾರದೊಳಗಾಗಿ ಕ್ರಮ ಕೈಗೊಳ್ಳದಿದ್ದರೆ ಕಾರ್ಖಾನೆಗಳ ಎದುರು ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.

ABOUT THE AUTHOR

...view details