ಕಲಬುರಗಿ:ಎನ್ಡಿಆರ್ಎಫ್ ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿಯ ಸತತ ಶೋಧ ಕಾರ್ಯದಿಂದಾಗಿ ನಿನ್ನೆ (ಆ.20) ಮಳೆ ನೀರಿನಲ್ಲಿ ಕೊಚ್ಚಿ ಹೋಗಿದ್ದ ಬಾಲಕನ ಮೃತ ದೇಹ ಇಂದು ಪತ್ತೆಯಾಗಿದೆ.
ನಗರದ ದುಬೈ ಕಾಲೋನಿ ನಿವಾಸಿ ಮಲ್ಲಿಕಾರ್ಜುನ (12) ಮೃತ ದುರ್ದೈವಿಯಾಗಿದ್ದಾನೆ. ಕಳೆದೊಂದು ವಾರದಿಂದ ಎಡಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಮೈದುಂಬಿಕೊಂಡು ನಿಂತಿರುವ ಬೊಸಗಾ ಕೆರೆ ಸೋಬಗನ್ನು ವೀಕ್ಷಿಸಲು ಡಬರಾಬಾದ್ ಗ್ರಾಮದ 22 ವರ್ಷದ ಯುವಕ ವಿಶ್ವರಾಧ್ಯನ ಜೊತೆಗೆ ಮಲ್ಲಿಕಾರ್ಜುನ ಬೈಕ್ ಮೇಲೆ ತೆರಳಿದ್ದನು ಎನ್ನಲಾಗಿದೆ.