ಕರ್ನಾಟಕ

karnataka

ಕಲಬುರಗಿ: ಡಿಫರೆಂಟ್ ಉಡುಪು ತೊಟ್ಟಿರುವ ಮೋದಿ.. ಕಲಾವಿದನ ಕೈಯಲ್ಲಿ ಅರಳಿದ ಪಿಎಂ

ಕಲಬುರಗಿ ಜಿಲ್ಲೆಗೆ‌ ಆಗಮಿಸಿಲಿರುವ ಪ್ರಧಾನಿ‌ ನರೇಂದ್ರ ಮೋದಿ ಅವರಿಗೆ ಉಡುಗರೆ ಕೊಡಲು ಕಲಾವಿದ ಉತ್ಸುಕ - ಮೋದಿಯ 60ಕ್ಕೂ‌ ಅಧಿಕ ಡಿಫರೆಂಟ್ ಉಡುಪುಗಳು ತೊಟ್ಟಿರುವ ಮೂರ್ತಿಗಳನ್ನ ಸಿದ್ದಪಡಿಸಿರುವ ಕಲಾವಿದ.

By

Published : Jan 17, 2023, 10:41 PM IST

Published : Jan 17, 2023, 10:41 PM IST

Updated : Jan 17, 2023, 10:57 PM IST

Narendra Modi idols wearing different clothes
ಡಿಫರೆಂಟ್ ಉಡುಪುಗಳು ತೊಟ್ಟಿರುವ ನರೇಂದ್ರ ಮೋದಿ ಮೂರ್ತಿಗಳನ್ನ ಸಿದ್ದಪಡಿಸಿರುವ ಕಲಾವಿದ

ಕಲಾವಿದ ವಿಶ್ವೇಶ್ವರಯ್ಯ ಭೋಮಿ

ಕಲಬುರಗಿ:ಬಿಸಿಲೂರು ಕಲಬುರಗಿ ಕಲಾವಿದನ‌ ಕೈಯಲ್ಲಿ‌ ಪ್ರಧಾನಿ‌ ನರೇಂದ್ರ ಮೋದಿ‌ ಅವರ ಪ್ರತಿಮೆಗಳು ಅನಾವರಣಗೊಂಡಿವೆ. ಖುರ್ತಾ ಫೈಜಾಮು‌ ತೊಟ್ಟು ಕೊರಳಿಗೆ ಶಾಲು ಹಾಕಿ ಮುಂದೆ ಹೆಜ್ಜೆ ಇಡುವ ಪ್ರತಿಮೆಗಳು ನೋಡಲು ತೇಟ್ ಮೋದಿಯವರಂತೆ ಕಾಣುತ್ತಿವೆ. ಇದೆ 19 ರಂದು ಕಲಬುರಗಿ ಜಿಲ್ಲೆಗೆ‌ ಆಗಮಿಸಿಲಿರುವ ಪ್ರಧಾನಿ‌ ನರೇಂದ್ರ ಮೋದಿ ಅವರಿಗೆ ಉಡುಗರೆ ಕೊಡಲು ಕಲಾವಿದ ಉತ್ಸುಕರಾಗಿದ್ದಾರೆ. ಆದರೆ, ಪ್ರಧಾನಿಯವರ ಭದ್ರತೆ ಹಿನ್ನೆಲೆ ಕಲಾವಿದನಿಗೆ ಅವಕಾಶ ಸಿಕ್ಕಿಲ್ಲ ಇದರಿಂದ ನಿರಾಶರಾದ ಕಲಾವಿಧ‌ ಖುದ್ದು ಮೊದಿ‌ ಕಚೇರಿಗೆ ಟ್ವೀಟ್ ಮಾಡಿದ್ದು ಅಲ್ಲಿಂದ ಸಕರಾತ್ಮಕ ಸ್ಪಂಧನೆ ಸಿಗುವ ನೀರಿಕ್ಷೆಯಲ್ಲಿದ್ದಾರೆ.

ನೋಡಲು ಅಂದವಾಗಿರುವ ಥೇಟ್​ ಪ್ರಧಾನಿ‌ ನರೇಂದ್ರ ಮೋದಿಯವರಂತೆ ಕಾಣುವ ಈ ಮೂರ್ತಿಗಳನ್ನು‌ ಸಿದ್ದ ಪಡಿಸಿರೋದು ಬಿಸಿಲೂರು ಕಲಬುರಗಿಯ ಖ್ಯಾತ ಕಲಾವಿಧ ವಿಶ್ವೇಶ್ವರಯ್ಯ ಭೋವಿ, ಕಪನೂರ್ ಕೈಗಾರಿಕಾ ಪ್ರದೇಶದಲ್ಲಿ ಮೂರ್ತಿ ತಯಾರಿಕಾ ಘಟಕ‌ ಹೊಂದಿರುವ ವಿಶ್ವೇಶ್ವರಯ್ಯ ಕಲಬುರಗಿ ಜಿಲ್ಲೆಗೆ ಪ್ರಧಾನಿ ಮೋದಿ ಬರಲಿದ್ದಾರೆಂಬ ಮಾಹಿತಿ ಅರಿತು ಮೋದಿಗೆ ಅರವರೇ ಮೂರ್ತಿ ಉಡುಗರೆ ಕೊಡಲು ಸಿದ್ದತೆ ಮಾಡಿಕೊಂಡಿದ್ದಾರೆ.

ಮೋದಿಯ ಡಿಫರೆಂಟ್ ಉಡುಪುಗಳು ತೊಟ್ಟಿರುವ ಮೂರ್ತಿಗಳನ್ನ ಸಿದ್ದಪಡಿಸಿರುವ ಕಲಾವಿದ:ಮೋದಿಯ 60ಕ್ಕೂ‌ ಅಧಿಕ ಡಿಫರೆಂಟ್ ಉಡುಪುಗಳು ತೊಟ್ಟಿರುವ ಮೂರ್ತಿಗಳನ್ನ ಸಿದ್ದಪಡಿಸಿದ್ದಾರೆ. ಇದೆ 19 ರಂದು ಕಲಬುರಗಿ ಜಿಲ್ಲೆ ಸೇಡಂ ತಾಲೂಕಿನ ಮಳಖೇಡಕ್ಕೆ‌ ಮೋದಿ ಆಗಮಿಸಲಿದ್ದು, ಈ ಸಂದರ್ಭದಲ್ಲಿ ಮೋದಿ ಅವರಿಗೆ ಕೊಡುವ ಆಸೆ ಹೊಂದಿದ್ದಾರೆ. ಆದರೆ, ಪ್ರಧಾನಿ ಅವರ ಭದ್ರತೆ ಹಿನ್ನೆಲೆ ಜಿಲ್ಲಾಡಳಿತ ಉಡುಗೊರೆ ನೀಡಲು ಅನುಮತಿ ನೀಡಿಲ್ಲ, ಇದು ಕಲಾವಿದನಿಗೆ ನಿರಾಸೆ ಮೂಡಿಸಿದ್ದು, ಖುದ್ದು ಪ್ರಧಾನಿ‌ ಕಚೇರಿ, ಮಾಧ್ಯಮ, ಸಿಎಂ ಸೇರಿ ಹಲವರಿಗೆ ಹ್ಯಾಷ್ಯ್‌ಟ್ಯಾಗ್ ಮಾಡಿ ಟ್ವೀಟ್ ಮಾಡಿದ್ದಾರೆ. ಸಕರಾತ್ಮಕ‌ ಸ್ಪಂದನೆ ಸಿಗಬಹುದು ಎಂಬ ನೀರಿಕ್ಷೆಯಲ್ಲಿದ್ದಾರೆ.

ಕಳೆದ 30 ವರ್ಷಗಳಿಂದ ಶಿಲ್ವಕಲೆ ಕ್ಷೇತ್ರದಲ್ಲಿ ಸೇವೆ:ವಿಶ್ವೇಶ್ವರಯ್ಯ ಅವರಿಗೆ ತಮ್ಮ ಪೂರ್ವಜರಿಂದ ಶಿಲ್ಪಕಲೆ ಅನ್ನೋದು ಬಳುವಳಿಯಾಗಿ ಒಲಿದು ಬಂದಿದೆ.‌ ಹಲವು ಬೃಹತ್ ಗಾತ್ರದ ಕಲಾಕೃತಿಗಳನ್ನು ತಯಾರಿಸಿರುವ ವಿಶ್ವೇಶ್ವರಯ್ಯ ಅವರು, ರಾಷ್ಟ್ರಪೀತ ಮಹಾತ್ಮಾ ಗಾಂಧಿ, ರಾಷ್ಟ್ರ ನಾಯಕ ಡಾ. ಬಿ.ಆರ್. ಅಂಬೇಡ್ಕರ್ ಸೇರಿದಂತೆ ಹಲವು ಮಹಾನ ನಾಯಕರ ಪ್ರತಿಮೆಗಳನ್ನ ತಯಾರಿಸಿ ಹೆಸರು ಮಾಡಿದ್ದಾರೆ.


ಮತ್ತೊಂದು‌ ಗಮನಾರ್ಹ ವಿಷಯ ಅಂದರೆ ಬೆಳಗಾವಿಯ ಸುವರ್ಣಸೌಧದ ಮೇಲಿರುವ ರಾಷ್ಟ್ರ ಲಾಂಛನವ ನಿರ್ಮಿಸಿರೋದು ಇದೇ ವಿಶ್ವೇಶ್ವರಯ್ಯ ಭೋವಿ ಅವರು ಅನ್ನೋದು ವಿಶೇಷವಾಗಿದೆ. ಕಳೆದ 30 ವರ್ಷಗಳಿಂದ ಶಿಲ್ವಕಲೆ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದು, ಲೋಹ ಶಿಲ್ಪಿಯೆಂದೇ ಪ್ರಸಿದ್ದಿ ಪಡೆದಿದ್ದಾರೆ. ಗುಲಬರ್ಗಾ ವಿಶ್ವವಿದ್ಯಾಲಯ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ. ಪ್ರಧಾನಿ ಮೋದಿ‌ ಅವರ ಭೇಟಿಗೆ ಒಂದು ಅವಕಾಶ ಕಲ್ಪಿಸಿಕೊಡಬೇಕೆಂದು ಮನವಿ ಮಾಡಿದ್ದಾರೆ.

ವಿಶ್ವೇಶ್ವರಯ್ಯನವರು‌ ಪ್ರಧಾನಿ ಮೋದಿ ಅವರ ಮೇಲಿನ ಅಭಿಮಾನಕ್ಕೆ ಪ್ರತಿಮೆಗಳು ತಯಾರಿಸಲಾಗಿದೆ. ಜಿಲ್ಲಾಡಳಿತ ಭದ್ರತೆ ಗಮನದಲ್ಲಿಟ್ಟುಕೊಂಡು ಮೋದಿ ಭೇಟಿಗೆ ಅವಕಾಶ ನಿರಾಕರಿಸಿದ್ದು ತೀವ್ರ ನಿರಾಸೆ ಉಂಟುಮಾಡಿದೆ. ಪ್ರಧಾನಿ ಕಾರ್ಯಾಲಯದಿಂದಲೇ ನೇರ ಉತ್ತರ ಬಂದು ಅವಕಾಶ ಕಲ್ಪಿಸಿದರೆ ಮಳಖೇಡ ಮೋದಿ ಅವರ ಕಾರ್ಯಕ್ರಮದಲ್ಲಿ ಉಡುಗರೆ ಜೊತೆಗೆ ಪ್ರದರ್ಶನ‌ಕ್ಕೆ ಇಡಲು‌ ಸಹ ವಿಶ್ವೇಶ್ವರಯ್ಯ ತಯಾರಿ ನಡೆಸಿದ್ದಾರೆ. ಮೋದಿ ಅವರ ಆಗಮನಕ್ಕೆ‌ ಇನ್ನೂ ಎರಡು ದಿನ‌ಗಳಿದ್ದು, ಅವಕಾಶ ಸಿಗಬಹುದಾ ಅನ್ನೋದು‌ ಕಾಯ್ದು ನೋಡಬೇಕು.

ಇದನ್ನೂ ಓದಿ:'ಮಹಾ'- ಕರ್ನಾಟಕಕ್ಕೆ 19ರಂದು ನಮೋ ಭೇಟಿ: ಚುನಾವಣೆ ಹೊಸ್ತಿಲಿನಲ್ಲಿ ವಿವಿಧ ಕಾರ್ಯಕ್ರಮಗಳಿಗೆ ಚಾಲನೆ

Last Updated : Jan 17, 2023, 10:57 PM IST

ABOUT THE AUTHOR

...view details