ಕರ್ನಾಟಕ

karnataka

ETV Bharat / state

ಯುವಕನ ಕೊಲೆ ಮಾಡಿದ್ದ ಮೂವರು ಆರೋಪಿಗಳು ಅರೆಸ್ಟ್ - Kalburgi murder news

ಯುವಕನೊಬ್ಬನನ್ನು ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿದ್ದ ಮೂವರು ಆರೋಪಿಗಳನ್ನು ವಿಶ್ವವಿದ್ಯಾಲಯ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Arrest
Arrest

By

Published : Jul 11, 2020, 1:46 PM IST

ಕಲಬುರಗಿ: ಸಾಲದ ಹಣ ವಾಪಸ್‌ ನೀಡುವಂತೆ ಕೇಳಿದ್ದಕ್ಕೆ ಯುವಕನೊಬ್ಬನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿದ್ದ ಮೂವರು ಆರೋಪಿಗಳನ್ನು ವಿಶ್ವವಿದ್ಯಾಲಯ ಠಾಣೆ ಪೊಲೀಸರು ಬಂಧಿಸಿದ್ದಾರೆ.

ತಾರಾಫೈಲ್ ಬಡಾವಣೆಯ ವಿಶಾಲ್ ಕೊಲೆಯಾದ ಯುವಕ. ಇದೆ ಬಡಾವಣೆಯ ಸುನಿಲ್ ಅಲಿಯಾಸ್ ಸೋನು ಕಾಂಬಳೆ, ಶಿವಲಿಂಗ ಹುಲಿಮನಿ ಹಾಗೂ ರಾಜು ಗುರುಸುಣಗಿ ಕೊಲೆ ಮಾಡಿದ ಬಂಧಿತ ಆರೋಪಿಗಳು. ಸುನಿಲ್ ಎಂಬಾತ ಕೊಲೆಯಾದ ವಿಶಾಲ್ ತಾಯಿಯಿಂದ ಮೂರು ಲಕ್ಷ ರೂಪಾಯಿ ಹಣ ಪಡೆದು ವಾಪಸ್‌ ಕೊಡದೇ ಸತಾಯಿಸುತ್ತಿದ್ದ. ಹಣ ಕೊಡುವಂತೆ ವಿಶಾಲ್ ಆರೋಪಿ ಮೇಲೆ ಒತ್ತಡ ಹಾಕುತ್ತಿದ್ದ, ಈ ಹಿನ್ನೆಲೆ ತನ್ನ ಸಂಗಡಿಗರ ಜೊತೆಗೂಡಿ ವಿಶಾಲ್‌ನನ್ನು ಕೊಲೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ನಾಗನಹಳ್ಳಿ ಕ್ರಾಸ್​​​​ನ ರಾಜಾಪುರ ನಾಲಾದ ಬ್ರಿಡ್ಜ್‌ ಬಳಿ ವಿಶಾಲ್ ಶವ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿ ದೊರಕಿದೆ. ಬಂಧಿತ ಮೂವರು ಆರೋಪಿಗಳನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ. ಈ ಕುರಿತು ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details