ಕರ್ನಾಟಕ

karnataka

ETV Bharat / state

ಟೊಯೋಟಾ ಆಡಳಿತ ಮಂಡಳಿಗೆ ಎಲ್ಲೋ ಒಂದು ಕಡೆ ಸರ್ಕಾರವೇ ಹೆದರುತ್ತಿದೆ.. ಹೆಚ್ ಸಿ ಬಾಲಕೃಷ್ಣ

ಕಾರ್ಮಿಕ ಸಚಿವರು ಕೇವಲ ಸಭೆ ನಡೆಸಿ ಸುಮ್ಮನ್ನಾಗಿ ಬಿಟ್ರು. ಎಲ್ಲೋ ಒಂದು ಕಡೆ ಸರ್ಕಾರ ಕೂಡ ಟೊಯೋಟಾ ಆಡಳಿತ ಮಂಡಳಿಯವರಿಗೆ ಹೆದರುತ್ತಿದ್ದಾರೆ ಎಂಬ ಸಂಶಯ ಮೂಡುತ್ತಿದೆ..

By

Published : Feb 15, 2021, 7:46 PM IST

appeals-to-cm-over-the-toyota-protest-mla-hc-balakrishna
ಶಾಸಕ ಹೆಚ್.ಸಿ.ಬಾಲಕೃಷ್ಣ

ರಾಮನಗರ :ಟೊಯೋಟಾಆಡಳಿತ ಮಂಡಳಿ‌ಯ ಹಠಮಾರಿ ಧೋರಣೆ ಕುರಿತು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ನೇತೃತ್ವದಲ್ಲಿ ಸಿ.ಎಂ.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ತಿಳಿಸಲಾಗುವುದು ಎಂದು ಮಾಜಿ ಶಾಸಕ ಹೆಚ್ ಸಿ ಬಾಲಕೃಷ್ಣ ಹೇಳಿದರು.

ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಟೊಯೋಟಾ ಕಾರ್ಮಿಕರ ಪ್ರತಿಭಟನೆ ಆರಂಭವಾಗಿ 100 ದಿನವಾಗುತ್ತಿದೆ. ಆದರೂ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ, ಕಾರ್ಮಿಕ ಸಚಿವರು ಕೇವಲ ಸಭೆ ನಡೆಸಿ ಸುಮ್ಮನ್ನಾಗಿ ಬಿಟ್ರು. ಎಲ್ಲೋ ಒಂದು ಕಡೆ ಸರ್ಕಾರ ಕೂಡ ಟೊಯೋಟಾ ಆಡಳಿತ ಮಂಡಳಿಯವರಿಗೆ ಹೆದರುತ್ತಿದ್ದಾರೆ ಎಂಬ ಸಂಶಯ ಮೂಡುತ್ತಿದೆ ಎಂದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಮಾಜಿ ಶಾಸಕ ಹೆಚ್ ಸಿ ಬಾಲಕೃಷ್ಣ..

3-4 ದಿನಗಳಲ್ಲಿ ಡಿ ಕೆ ಶಿವಕುಮಾರ್ ನೇತೃತ್ವದಲ್ಲಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಅಂತಿಮವಾಗಿ ಮನವಿ ಮಾಡುತ್ತೇವೆ. ನಮ್ಮ ಮನವಿಗೆ ಸ್ಪಂದನೆ ಸಿಗದಿದ್ರೆ ಮುಂದಿನ ಹೋರಾಟದ ನಿಲುವನ್ನು ತಿಳಿಸುತ್ತೇವೆ ಎಂದು ಹೇಳಿದರು.

ABOUT THE AUTHOR

...view details