ಕರ್ನಾಟಕ

karnataka

ETV Bharat / state

ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ.. 'ಶಾಲೆ ಕಡೆ ನನ್ನ ನಡೆ' ಜಾಥಾಗೆ ಚಾಲನೆ - kannada news

ಶಾಲೆಗೆ ಸೇರಿ ಬಿಟ್ಟ ಮಕ್ಕಳನ್ನು ಮರಳಿ ಶಾಲೆಗೆ ದಾಖಲಿಸುವಂತೆ 'ಶಾಲೆ ಕಡೆ ನನ್ನ ನಡೆ' ಜನಜಾಗೃತಿ ಜನಾಂದೋಲನ ಜಾಥಾಕ್ಕೆ ಜೇವರ್ಗಿಯ ತಾಲೂಕು ಕಾನೂನು ಸೇವಾ ಸಮಿತಿಯ ಉಪಾಧ್ಯಕ್ಷ ಎಸ್ಎ ಪಾಟೀಲ ಅವರು ಮಂಗಳವಾರ ಚಾಲನೆ ನೀಡಿದರು.

'ಶಾಲೆ ಕಡೆ ನನ್ನ ನಡೆ' ಜಾಥಾಗೆ ಜಾಲನೆ

By

Published : Jul 16, 2019, 11:04 PM IST

ಕಲಬುರಗಿ : ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ ಅಂಗವಾಗಿ ಜೇವರ್ಗಿ ಸರ್ಕಾರಿ ಬಾಲಕಿಯರ ಪ್ರೌಢಶಾಲೆ ವಿದ್ಯಾರ್ಥಿಗಳಿಂದ ಜನಾಂದೋಲನ ಜಾಥಾ ನಡೆಸಲಾಯಿತು.

ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ವಿವಿಧ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ ಶಾಲೆಯಿಂದ ಹೊರಗುಳಿದ ಮತ್ತು ಶಾಲೆಗೆ ಸೇರಿ ಬಿಟ್ಟ ಮಕ್ಕಳನ್ನು ಮರಳಿ ಶಾಲೆಗೆ ದಾಖಲಿಸುವಂತೆ 'ಶಾಲೆ ಕಡೆ ನನ್ನ ನಡೆ' ಜನಜಾಗೃತಿ ಜನಾಂದೋಲನ ಜಾಥಾಕ್ಕೆ ಜೇವರ್ಗಿಯ ತಾಲೂಕು ಕಾನೂನು ಸೇವಾ ಸಮಿತಿಯ ಉಪಾಧ್ಯಕ್ಷ ಎಸ್ಎ ಪಾಟೀಲ ಅವರು ಮಂಗಳವಾರ ಚಾಲನೆ ನೀಡಿದರು. ನಗರ ವಿವಿಧೆಡೆ ಜಾಥಾ ‌ನಡೆಸುವ ಮೂಲಕ‌ ವಿದ್ಯಾರ್ಥಿನಿಯರು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು.

'ಶಾಲೆ ಕಡೆ ನನ್ನ ನಡೆ' ಜಾಥಾಗೆ ಜಾಲನೆ

ಜೇವರ್ಗಿ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ ಮುಖ್ಯಗುರು ವಿರುಪಣ್ಣಾ ಗುಡಮಿ, ರಾಷ್ಟ್ರೀಯ ಬಾಲಕಾರ್ಮಿಕ ಯೋಜನಾ ಸಂಘದ ಯೋಜನಾ ನಿರ್ದೇಶಕ ಸಂತೋಷ ಕುಲಕರ್ಣಿ ಜೇವರ್ಗಿ ತಹಶೀಲ್ದಾರ್ ರಮೇಶ ಬಾಬು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಶಾಂತಪ್ಪ ಹುಲ್ಕಲ್‌ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

'ಶಾಲೆ ಕಡೆ ನನ್ನ ನಡೆ' ಜಾಥಾಗೆ ಜಾಲನೆ

ABOUT THE AUTHOR

...view details