ಕರ್ನಾಟಕ

karnataka

ETV Bharat / state

ಸರ್ಕಾರದ ಆದೇಶಕ್ಕಿಲ್ಲ ಕಿಮ್ಮತ್ತು.. ಕಲಬುರಗಿಯ ಇಂದಿರಾ ಕ್ಯಾಂಟೀನ್​ಗಳಲ್ಲಿ ಹಣ ಪಡೆಯುತ್ತಿರುವ ಆರೋಪ.. - ಕಲಬುರಗಿ ಲೇಟೆಸ್ಟ್​ ನ್ಯೂಸ್

ಮೊದಲೇ ಕೆಲಸ ಇಲ್ಲದೆ ಮನೆಯಲ್ಲೇ ಇದ್ದೇವೆ. ಜೇಬಿನಲ್ಲಿ ನಯಾ ಪೈಸೆ ಇಲ್ಲ. ಹೊಟ್ಟೆ ಹಸಿದರೆ ಊಟ ಮಾಡೋದಕ್ಕೂ ಹಣವಿಲ್ಲ. ಹೈಕೋರ್ಟ್ ಆದೇಶದಂತೆ ಉಚಿತ ಆಹಾರ ಸಿಗುತ್ತೆ ಎಂದು ಖುಷಿಪಟ್ಟೆವು. ಆದರೆ, ಇಲ್ಲಿ ಸರ್ಕಾರದ ಆದೇಶಕ್ಕೂ ಕಿಮ್ಮತ್ತಿಲ್ಲ ಎಂದಿದ್ದಾರೆ..

Kalburagi
ಕಲಬುರಗಿಯ ಇಂದಿರಾ ಕ್ಯಾಂಟೀನ್​ಗಳಲ್ಲಿ ಹಣ ಪಡೆಯುತ್ತಿರುವ ಆರೋಪ

By

Published : May 12, 2021, 2:17 PM IST

ಕಲಬುರಗಿ : ಹೈಕೋರ್ಟ್ ಆದೇಶದಂತೆ ರಾಜ್ಯದ ಎಲ್ಲಾ ಇಂದಿರಾ ಕ್ಯಾಂಟೀನ್​ಗಳಲ್ಲಿ ಮೂರು ಹೊತ್ತು ಉಚಿತ ಊಟ, ಉಪಹಾರ ಕೊಡಲು ರಾಜ್ಯ ಸರ್ಕಾರ ಆರ್ಡರ್‌ ಮಾಡಿದೆ. ಆದರೆ, ಕಲಬುರಗಿಯ ಇಂದಿರಾ ಕ್ಯಾಂಟೀನ್​ನಲ್ಲಿ 10 ರೂ. ಪಡೆಯಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.

ಕಲಬುರಗಿಯ ಇಂದಿರಾ ಕ್ಯಾಂಟೀನ್​ಗಳಲ್ಲಿ ಹಣ ಪಡೆಯುತ್ತಿರುವ ಆರೋಪ

ಕೊಳೆಗೇರಿ ಪ್ರದೇಶದಲ್ಲಿ ವಾಸ ಮಾಡುತ್ತಿರುವವರು, ದಿನಗೂಲಿ ಮಾಡಿ ಜೀವನ ನಡೆಸುತ್ತಿದ್ದವರು, ವಲಸೆ ಕಾರ್ಮಿಕರು ಈ ಲಾಕ್‌ಡೌನ್ ಸಮಯದಲ್ಲಿ ಕೆಲಸವೂ ಇಲ್ಲದೆ, ಊಟವೂ ಇಲ್ಲದೆ ಪರದಾಡಬಾರದೆಂದು ಇಂದಿರಾ ಕ್ಯಾಂಟೀನ್​ಗಳಲ್ಲಿ ಮೂರು ಹೊತ್ತು ಉಚಿತ ಊಟ, ಉಪಹಾರ ನೀಡಲು ಆದೇಶಿಸಲಾಗಿದೆ.

ಆದರೆ, ಕಲಬುರಗಿಯ ಹಲವು ಇಂದಿರಾ ಕ್ಯಾಂಟೀನ್​ಗಳಲ್ಲಿ ಹಣ ಪಡೆದು ಊಟ ಕೊಡ್ತಿದ್ದಾರೆ ಎಂದು ಕಟ್ಟಡ ಕಾರ್ಮಿಕರು ಆರೋಪಿಸಿದ್ದಾರೆ. ಬಡವರಿಗೆ, ನಿರ್ಗತಿಕರಿಗೆ ಲಾಕ್​​ಡೌನ್​ ಮುಗಿಯುವ ತನಕ ಉಚಿತ ಊಟ ನೀಡಬೇಕು ಎಂಬ ಆದೇಶವಿದೆ. ಆದರೆ, ಇಲ್ಲಿನ ಕ್ಯಾಂಟಿನ್​​ಗಳಲ್ಲಿ ಬಡವರ ಬಳಿ ಹಣ ಪಡೆಯುತ್ತಿದ್ದಾರೆ.

ಮೊದಲೇ ಕೆಲಸ ಇಲ್ಲದೆ ಮನೆಯಲ್ಲೇ ಇದ್ದೇವೆ. ಜೇಬಿನಲ್ಲಿ ನಯಾ ಪೈಸೆ ಇಲ್ಲ. ಹೊಟ್ಟೆ ಹಸಿದರೆ ಊಟ ಮಾಡೋದಕ್ಕೂ ಹಣವಿಲ್ಲ. ಹೈಕೋರ್ಟ್ ಆದೇಶದಂತೆ ಉಚಿತ ಆಹಾರ ಸಿಗುತ್ತೆ ಎಂದು ಖುಷಿಪಟ್ಟೆವು. ಆದರೆ, ಇಲ್ಲಿ ಸರ್ಕಾರದ ಆದೇಶಕ್ಕೂ ಕಿಮ್ಮತ್ತಿಲ್ಲ ಎಂದಿದ್ದಾರೆ.

ಓದಿ:ಮದ್ಯದ ಅಮಲಿನಲ್ಲಿ ಪೊಲೀಸರ ಮೇಲೆಯೇ ಕಾರು ಹತ್ತಿಸಲು ಯತ್ನಿಸಿದವನಿಗೆ ಬಿತ್ತು ಭಾರೀ ದಂಡ!

ABOUT THE AUTHOR

...view details