ಕರ್ನಾಟಕ

karnataka

By

Published : Aug 31, 2021, 11:04 PM IST

ETV Bharat / state

ಆಳಂದ ಪೊಲೀಸರ ಕಾರ್ಯಾಚರಣೆ: ವ್ಯಕ್ತಿಯ ಬಂಧನ, 3 ಪಿಸ್ತೂಲ್, 10 ಗುಂಡು ವಶಕ್ಕೆ

ಅಕ್ರಮವಾಗಿ ಮೂರು ನಾಡ ಪಿಸ್ತೂಲ್​ ಹೊಂದಿದ್ದ ಕಲಬುರಗಿ ಜಿಲ್ಲೆಯ ಖಜೂರಿ ಗ್ರಾಮದ ವ್ಯಕ್ತಿಯೊಬ್ಬನನ್ನು ಆಳಂದ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿ ಪಿಸ್ತೂಲ್​ ಮಾರಾಟ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.

aland-police-arrested-illegal-gun-supplier
ಆಳಂದ ಪೊಲೀಸ್

ಕಲಬುರಗಿ: ಅಕ್ರಮವಾಗಿ ಮೂರು ನಾಡ ಪಿಸ್ತೂಲ್​ ಹೊಂದಿದ್ದ​ ವ್ಯಕ್ತಿಯನ್ನು ಬಂಧಿಸುವಲ್ಲಿ ಆಳಂದ ಪೊಲೀಸರು ಯಶಸ್ವಿಯಾಗಿದ್ದಾರೆ.

ಖಜೂರಿ ಗ್ರಾಮದ ಉಸ್ಮಾನ ಶೇಖ್​ ಬಂಧಿತ ಆರೋಪಿ. ಆರೋಪಿಯಿಂದ 3 ನಾಡ ಪಿಸ್ತೂಲ್​​​​​ ಮತ್ತು10 ಜೀವಂತ ಗುಂಡು ವಶಕ್ಕೆ ಪಡೆಯಲಾಗಿದೆ. ಬಂಧಿತ ಉಸ್ಮಾನ ಶೇಖ್​ ಪಿಸ್ತೂಲ್ ಮಾರಾಟ ಮಾಡುತ್ತಿದ್ದ ಎಂಬ ಶಂಕೆ ವ್ಯಕ್ತವಾಗಿದೆ.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಪಿಸ್ತೂಲ್​​​ ಎಲ್ಲಿಂದ ತರುತ್ತಿದ್ದ, ಯಾರಿಗೆ ಮಾರಾಟ ಮಾಡುತ್ತಿದ್ದ ಎನ್ನುವ ಕುರಿತು ತನಿಖೆ ಕೈಗೊಂಡಿದ್ದಾರೆ. ಆಳಂದ ಪೊಲೀಸ್​​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details