ಕರ್ನಾಟಕ

karnataka

ETV Bharat / state

ಕಲಬುರಗಿ: ಮದುವೆಯಾಗುವುದಾಗಿ ನಂಬಿಸಿ ಯುವತಿಗೆ ಮೋಸದ ಆರೋಪ, ದೂರು ದಾಖಲು

ಮದುವೆ ಮಾಡಿಕೊಳ್ಳುವುದಾಗಿ ನಂಬಿಸಿ ವಂಚಿಸಿದ್ದಾರೆ ಎಂದು ಆರೋಪಿಸಿ ಯುವತಿಯೊಬ್ಬರು ದೂರು ನೀಡಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ.

By ETV Bharat Karnataka Team

Published : Sep 9, 2023, 10:38 PM IST

Updated : Sep 9, 2023, 11:01 PM IST

ಮದುವೆಯಾಗುವುದಾಗಿ ನಂಬಿಸಿ ಯುವತಿಗೆ ವಂಚನೆ
ಮದುವೆಯಾಗುವುದಾಗಿ ನಂಬಿಸಿ ಯುವತಿಗೆ ವಂಚನೆ

ಕಲಬುರಗಿ:ಮದುವೆ ಆಗುವುದಾಗಿ ನಂಬಿಸಿ ಯುವತಿಗೆ ವಂಚಿಸಿ ಜೈಲು ಸೇರಿದ್ದ ಯುವಕ, ಜಾಮೀನು ಪಡೆದು ಮದುವೆ ಆಗುವುದಾಗಿ ಯುವತಿಗೆ ಒಪ್ಪಿಸಿ ಜೈಲಿಂದ ಹೊರ ಬಂದು ಮತ್ತೇ ವಂಚಿಸಿದ್ದು, ಆತನ ವಿರುದ್ಧ ಯುವತಿ ಮತ್ತೊಮ್ಮೆ ದೂರು ದಾಖಲಿಸಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಬ್ಯಾಂಕ್ ಒಂದರಲ್ಲಿ ಉದ್ಯೋಗಿಯಾಗಿರುವ ಯುವತಿಗೆ ಚಿತ್ತಾಪುರ ತಾಲೂಕಿನ ರಾಮತೀರ್ಥದ ರಾಘವೇಂದ್ರ ರೆಡ್ಡಿ ಎಂಬಾತ ಮತ್ತೆ ಮೋಸ ಮಾಡಿದ್ದಾನೆ ಎಂದು ಅಶೋಕನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.

ಘಟನೆಯ ವಿವರ: ಈ ಹಿಂದೆ ರಾಘವೇಂದ್ರ ಮದುವೆಯಾಗುವುದಾಗಿ ನಂಬಿಸಿ ಯುವತಿಯೊಂದಿಗೆ ಸಹ ಜೀವನ ಕಳೆದು ನಂತರ ಮದುವೆ ಮುಂದುಡುತ್ತಾ ಬಂದಿದ್ದ. ಇದನ್ನು ಕಂಡ ಯುವತಿ ಮನೆಯವರು ವಿಜಯಪುರದ ಬೇರೊಬ್ಬ ಯುವಕನೊಂದಿಗೆ ಆಕೆಗೆ ಮದುವೆ ನಿಶ್ಚಿತಾರ್ಥ ಮಾಡಿದ್ದರು. ಆದರೆ, ಈ ವಿಚಾರ ರಾಘವೇಂದ್ರನಿಗೆ ತಿಳಿದು ಯುವತಿ ಜೊತೆಗೆ ಇದ್ದಾಗ ತೆಗೆದ ಅಶ್ಲೀಲ ಚಿತ್ರ ಮತ್ತು ವಿಡಿಯೋಗಳನ್ನು ಆಕೆಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡ ಯುವಕನಿಗೆ ಕಳುಹಿಸಿ ಅವರ ಸಂಬಂಧ ಮುರಿದಿದ್ದ. ತಾನೂ ಮದುವೆಯಾಗಲು ಒಪ್ಪದೇ, ಬೇರೊಬ್ಬ ಯುವಕನ ಜೊತೆಗೂ ಮದುವೆಯಾಗಲು ಬಿಡದೆ ರಾಘವೇಂದ್ರ ತನ್ನ ಬಾಳನ್ನೇ ಹಾಳು ಮಾಡುತ್ತಿದ್ದಾನೆ ಎಂದು ನೊಂದ ಯುವತಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಆತನ ವಿರುದ್ಧ ವಂಚನೆ ಪ್ರಕರಣ ದಾಖಲಿಸಿದ್ದರು. ಈ ದೂರಿನನ್ವಯ ಪೊಲೀಸರು ಆತನನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು.

ಇದಾದ ನಂತರ ಆತ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರಿಂದ ಯುವತಿ ತಕರಾರು ಅರ್ಜಿ ಸಲ್ಲಿಸಿ ಜಾಮೀನು ಸಿಗದಂತೆ ಮಾಡಿದ್ದಳು. ಆಗ ಯುವಕ ಮತ್ತು ಆತನ ಕುಟುಂಬದವರು ಮದುವೆ ಮಾಡುವುದಾಗಿ ನಂಬಿಸಿ ಜಾಮೀನು ಪಡೆದು ಜೈಲಿಂದ ಹೊರ ಬಂದು ಬೇರೊಂದು ಯುವತಿಯ ಜೊತೆಗೆ ಆತನ ಮದುವೆ ಮಾಡಿದ್ದಾರೆ. ಈ ವಿಚಾರ ಗೊತ್ತಾದ ಬಳಿಕ ಮತ್ತೆ ಯುವತಿ ರಾಘವೇಂದ್ರ ಹಾಗೂ ಆತನ ಕುಟುಂಬದವರಿಗೆ ಪ್ರಶ್ನಿಸಿದ್ದಾಳೆ. ಮಾತ್ರವಲ್ಲ, ರಾಘವೇಂದ್ರನ ಜೊತೆ ವಿವಾಹವಾಗಿದ್ದ ಯುವತಿ ಜೊತೆ ಮಾತನಾಡಲು ಮೋಸ ಹೋದ ಯುವತಿ ತೆರಳಿದ್ದಾಳೆ. ಈ ವೇಳೆ, ಆಕೆಗೆ ಬೆದರಿಕೆ ಹಾಕಲಾಗಿದೆ ಎಂಬ ಆರೋಪವೂ ಕೇಳಿ ಬಂದಿದೆ.

ಯುವತಿಯು ಬ್ಯಾಂಕ್​ನಲ್ಲಿ ಕೆಲಸ ಮಾಡುವಾಗ ರಾಘವೇಂದ್ರನಿಗೆ ಹಣ ಕೊಟ್ಟಿದ್ದಾಳೆ. ಮಾತ್ರವಲ್ಲ, ಆತನೊಂದಿಗೆ ಮೂರು ವರ್ಷ ಲಿವಿಂಗ್ ರಿಲೇಷನ್ ಶಿಪ್ ಇಟ್ಟುಕೊಂಡಿದ್ದಳು. ಮದುವೆಯಾಗುವುದಾಗಿ ನಂಬಿಸಿ ಬಳಿಕ ನಿರಾಕರಿಸಲಾಗಿದೆ. ಆ ನಂತರ ಜಾಮೀನು ವ್ಯಾಜ್ಯವೊಂದು ಬಂದಾಗ ಇದೇ ದೂರುದಾರೆ ನೆರವು ನೀಡಿದ್ದಾಳೆ. ಆದರೂ ರಾಘವೇಂದ್ರ ಮತ್ತು ಮತ್ತು ಆತನ ಕುಟುಂಬವೂ ಮೋಸ ಮಾಡಿದೆ ಎಂದು ಯುವತಿ ಆರೋಪಿಸಿದ್ದಾಳೆ. ಈ ಸಂಬಂಧ ರಾಘವೇಂದ್ರ ಮತ್ತು ಆತನ ಕುಟುಂಬದವರ ವಿರುದ್ಧ ಮತ್ತೆ ದೂರು ದಾಖಲಿಸಿದ್ದಾರೆ.

ಇದನ್ನೂ ಓದಿ:ಲೋಕ ಅದಾಲತ್​: ವಿಚ್ಛೇದನಕ್ಕೆ ತಯಾರಾಗಿದ್ದ 13 ಜೋಡಿಗಳು ಒಂದಾದ ಕ್ಷಣಕ್ಕೆ ಸಾಕ್ಷಿಯಾದ ಕೌಟುಂಬಿಕ ನ್ಯಾಯಾಲಯ

Last Updated : Sep 9, 2023, 11:01 PM IST

ABOUT THE AUTHOR

...view details