ಕಲಬುರಗಿ:ಅಯೋಧ್ಯೆಯಲ್ಲಿ ಶ್ರೀರಾಮನ ಮಂದಿರಕ್ಕಿಂದು ಶಿಲಾನ್ಯಾಸ ನೆರವೇರಿದೆ. ಮಂದಿರ ನಿರ್ಮಾಣಕ್ಕೆ ಬಳಕೆಯಾಗಲಿರುವ 9 ಕೆ.ಜಿ ಬೆಳ್ಳಿ ಇಟ್ಟಿಗೆಗೆ ಕಲಬುರಗಿ ನಗರದಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು.
ಶ್ರೀರಾಮನ ಮಂದಿರಕ್ಕೆ 9 ಕೆ.ಜಿ ಬೆಳ್ಳಿ ಇಟ್ಟಿಗೆ: ಕಲಬುರಗಿಯಲ್ಲಿ ಪೂಜೆ - Brick Worship Kalaburagi News
ಅಯೋಧ್ಯೆಯ ಶ್ರೀರಾಮಸೇನೆ ದೇಗುಲ ನಿರ್ಮಾಣದಲ್ಲಿ ಬಳಕೆಯಾಗಲಿರುವ ಕಲಬುರಗಿಯ ಬೆಳ್ಳಿ ಇಟ್ಟಿಗೆಗೆ ಕೆಕೆಆರ್ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೆವೂರ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಹಾಗೂ ಮಾಜಿ ಸಚಿವರಾದ ಮಾಲೀಕಯ್ಯ ಗುತ್ತೇದಾರ್ ಪೂಜೆ ನೆರವೇರಿಸಿದರು.

ಶ್ರೀರಾಮನ ಮಂದಿರಕ್ಕೆ 9 ಕೆ.ಜಿ ಬೆಳ್ಳಿ ಇಟ್ಟಿಗೆ: ಕಲಬುರಗಿಯಲ್ಲಿ ಇಟ್ಟಿಗೆ ಪೂಜೆ
ಶ್ರೀರಾಮನ ಮಂದಿರಕ್ಕೆ 9 ಕೆ.ಜಿ ಬೆಳ್ಳಿ ಇಟ್ಟಿಗೆ: ಕಲಬುರಗಿಯಲ್ಲಿ ಪೂಜೆ
ಶ್ರೀರಾಮನ ಪರಮಭಕ್ತ ರಾಜು ಭವಾನಿ ಎಂಬುವರು ಕೋಲ್ಕತ್ತಾ ಮೂಲದ ಚಿನ್ನಾಭರಣ ವ್ಯಾಪಾರಿಯೊಬ್ಬರಿಂದ 9 ಕೆ. ಜಿ ತೂಕದ ಬೆಳ್ಳಿ ಇಟ್ಟಿಗೆಯನ್ನು ಮಾಡಿಸಿದ್ದಾರೆ. ಇದೇ ವಾರದಲ್ಲಿ ಯುಪಿ ಸಿಎಂ ಯೋಗಿ ಆದಿತ್ಯನಾಥ್ ಮೂಲಕ ಅಯೋಧ್ಯೆಯ ಟ್ರಸ್ಟ್ಗೆ ಬೆಳ್ಳಿ ಇಟ್ಟಿಗೆಯನ್ನು ಹಸ್ತಾಂತರಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.