ಕರ್ನಾಟಕ

karnataka

By

Published : Aug 15, 2019, 10:04 PM IST

Updated : Aug 15, 2019, 11:05 PM IST

ETV Bharat / state

73ನೇ ಸ್ವಾತಂತ್ರ್ಯೊತ್ಸವ: ಗಮನ ಸೆಳೆದ ವಿದ್ಯಾರ್ಥಿಗಳ ವೇಶಭೂಷಣ

ನಗರದ ಪೊಲೀಸ್​ ಪರೇಡ್ ಮೈದಾನದಲ್ಲಿ ಹಮ್ಮಿಕೊಂಡಿದ್ದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಶಾಲಾ ವಿದ್ಯಾರ್ಥಿಗಳು ರಂಗುರಂಗಿನ ಬಟ್ಟೆ ಧರಿಸಿ ದೇಶಭಕ್ತಿ ಗೀತೆಗಳಿಗೆ ನೃತ್ಯ ಮಾಡುವ ಮೂಲಕ ನೆರೆದಿದ್ದ ಸಾವಿರಾರು ಜನರ ಗಮನ ಸೆಳೆದರು.

73ನೇ ಸ್ವಾತಂತ್ರ್ಯೊತ್ಸವ: ವಿವಿಧ ವೇಷ ಭೂಷಣ ಧರಿಸಿದ ಶಾಲಾ ವಿದ್ಯಾರ್ಥಿಗಳು

ಕಲಬುರಗಿ: ಶಿಸ್ತಿನ ಸಿಪಾಯಿಗಳಂತೆ ಕೇಸರಿ, ಬಿಳಿ, ಹಸಿರು ಬಣ್ಣದ ವೇಷ ಭೂಷಣ ಧರಿಸಿ ಶಾಲಾ ವಿದ್ಯಾರ್ಥಿಗಳು ದೇಶಭಕ್ತಿ ಗೀತೆಗಳಿಗೆ ಹೆಜ್ಜೆ ಹಾಕಿದ್ದು, 73ನೇ ಸ್ವಾತಂತ್ರ್ಯೊತ್ಸವದ ಮೆರಗನ್ನು ಮತ್ತಷ್ಟು ಹೆಚ್ಚಿಸಿತು.

ನಗರದ ಪೊಲೀಸ್​ ಪರೇಡ್ ಮೈದಾನದಲ್ಲಿ ಹಮ್ಮಿಕೊಂಡಿದ್ದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ರಂಗುರಂಗಿನ ಬಟ್ಟೆ ಧರಿಸಿ ದೇಶಭಕ್ತಿ ಗೀತೆಗಳಿಗೆ ನೃತ್ಯ ಮಾಡುವ ಮೂಲಕ ನೆರೆದಿದ್ದ ಸಾವಿರಾರು ಜನರ ಗಮನ ಸೆಳೆದರು. ಮಹಾತ್ಮಾ ಗಾಂಧಿ, ಸುಭಾಷ್‌ ಚಂದ್ರ ಬೋಸ್‌, ಡಾ. ಬಿ.ಆರ್‌.ಅಂಬೇಡ್ಕರ್, ಜವಾಹರಲಾಲ್ ನೆಹರು, ರಾಣಿ ಚೆನ್ನಮ್ಮ, ರೈತ ಹೀಗೆ ಹಲವಾರು ಮಹಾನ್‌ ವ್ಯಕ್ತಿಗಳ ವೇಷ ಧರಿಸಿದ್ದ ವಿದ್ಯಾರ್ಥಿಗಳು ಸ್ವಾತಂತ್ರ್ಯ ಹೋರಾಟವನ್ನು ನೆನಪಿಸಿದರು.

ನಗರದ ವಿವಿಧ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಸಾರೇ ಜಾಹಾಂಸೇ ಅಚ್ಚಾ, ಮಾ ತುಜೇ ಸಲಾಂ ಹೀಗೆ ಹಲವು ದೇಶಭಕ್ತಿ ಗೀತೆಗಳಿಗೆ ಹೆಜ್ಜೆ ಹಾಕುವ ‌ಮೂಲಕ ಭಾರತದ ಸಂಸ್ಕೃತಿಯನ್ನು ಎತ್ತಿಹಿಡಿದರು‌. ಮೈ ರೋಮಾಂಚನಗೊಳಿಸುವ ವಿದ್ಯಾರ್ಥಿಗಳ ನೃತ್ಯಕ್ಕೆ ಪ್ರೇಕ್ಷಕರು ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿದರು. ಎಸ್.ಬಿ.ಆರ್ ಶಾಲಾ ಮಕ್ಕಳು ಮಲ್ಲಗಂಬ ಸಾಹಸ ಪ್ರದರ್ಶಿಸುವ ಮೂಲಕ ಎಲ್ಲರ ಗಮನ ಸೆಳೆದರು.

Last Updated : Aug 15, 2019, 11:05 PM IST

ABOUT THE AUTHOR

...view details