ಕರ್ನಾಟಕ

karnataka

By

Published : Aug 13, 2019, 10:00 AM IST

ETV Bharat / state

ಪ್ರವಾಹಕ್ಕೆ ಬಲಿಯಾದ ಜೇವರ್ಗಿ ವ್ಯಕ್ತಿ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ

ಬಸಣ್ಣ ದೊಡ್ಡಮನಿ ಜಾನುವಾರುಗಳಿಗೆ ನೀರು ಕುಡಿಸಲು ಹೋದಾಗ ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದರು. ಸುಮಾರು ಹತ್ತು ಗಂಟೆಗಳ ಶೋಧ ಕಾರ್ಯಾಚರಣೆ ಬಳಿಕ ನಿನ್ನೆ ಶವವಾಗಿ ಪತ್ತೆಯಾಗಿದ್ದರು.

ಪ್ರವಾಹಕ್ಕೆ ಬಲಿಯಾದ ಬಸಣ್ಣ ಕುಟುಂಬಕ್ಕೆ 5 ಲಕ್ಷ ಪರಿಹಾರ

ಕಲಬುರಗಿ: ಭೀಮಾನದಿ ಪ್ರವಾಹಕ್ಕೆ ಬಲಿಯಾದ ರೈತ ಬಸಣ್ಣ ದೊಡ್ಡಮನಿ ಕುಟುಂಬಕ್ಕೆ ಶಾಸಕ ಅಜಯ್​ ಸಿಂಗ್ 5 ಲಕ್ಷ ರೂಪಾಯಿ ಪರಿಹಾರ ನೀಡಿ ಸಾಂತ್ವನ ಹೇಳಿದರು.

ಜೇವರ್ಗಿ ತಾಲೂಕಿನ ಕೋಳಕೂರ ಗ್ರಾಮದ ರೈತ ಬಸಣ್ಣ ದೊಡ್ಡಮನಿ ಜಾನುವಾರುಗಳಿಗೆ ನೀರು ಕುಡಿಸಲು ಹೋದಾಗ ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದರು. ಸುಮಾರು 10 ಗಂಟೆಗಳ ಶೋಧ ಕಾರ್ಯದ ಬಳಿಕ ನಿನ್ನೆ ಶವವಾಗಿ ಪತ್ತೆಯಾಗಿದ್ದರು.

ಶಾಸಕ ಡಾ.ಅಜಯ ಸಿಂಗ್ ಹಾಗೂ ಅಧಿಕಾರಿಗಳು ಮೃತನ ಮನೆಗೆ ಭೇಟಿ ನೀಡಿ, ಅವರ ಕುಟುಂಬಕ್ಕೆ ನೆರೆ ಸಂತ್ರಸ್ತರ ಪರಿಹಾರ ನಿಧಿಯಿಂದ 5 ಲಕ್ಷ ರೂಪಾಯಿ ಚೆಕ್ ನೀಡಿ, ಸಾಂತ್ವನ ಹೇಳಿದರು.

ABOUT THE AUTHOR

...view details