ಕರ್ನಾಟಕ

karnataka

ಕಲಬುರಗಿಯ ಹುತಾತ್ಮ ಯೋಧನ ಕುಟುಂಬಕ್ಕೆ ಪರಿಹಾರದ ಚೆಕ್​ ವಿತರಿಸಿದ ದೇಶಪಾಂಡೆ

By

Published : Jul 3, 2019, 7:07 PM IST

ಕಂದಾಯ ಸಚಿವ ಆರ್​ ವಿ ದೇಶಪಾಂಡೆ ಇಂದು ಕಲಬುರಗಿಗೆ ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ. ಈ ವೇಳೆ ಅವರು ಕಳೆದ ಜೂನ್ 28ರಂದು ಛತ್ತೀಸ್​ಗಢದ ಬಿಜಾಪುರದಲ್ಲಿ ನಕ್ಸಲ್ ದಾಳಿಯಿಂದ ಹುತಾತ್ಮರಾದ ವೀರಯೋಧ ಮಹಾದೇವ ಪೊಲೀಸ್​ ಪಾಟೀಲ್ ಅವರ ಕುಟುಂಬಕ್ಕೆ ಸರ್ಕಾರದಿಂದ 25ಲಕ್ಷ ರೂಪಾಯಿ ಪರಿಹಾರದ ಚೆಕ್ ವಿತರಿಸಿ ಸಾಂತ್ವನ ಹೇಳಿದ್ದಾರೆ.

ಆರ್.ವಿ ದೇಶಪಾಂಡೆ ಪರಿಹಾರ ವನ್ನು ವಿತರಿಸಿದರು

ಕಲಬುರಗಿ: ಛತ್ತೀಸ್​​ಗಢನಲ್ಲಿ ನಕ್ಸಲ್ ದಾಳಿಯಿಂದ ಹುತಾತ್ಮರಾದ ವೀರಯೋಧ ಮಹಾದೇವ ಪೊಲೀಸ್ ಪಾಟೀಲ್ ಕುಟುಂಬಕ್ಕೆ ಕಂದಾಯ ಸಚಿವ ಆರ್.ವಿ ದೇಶಪಾಂಡೆ ಪರಿಹಾರದ ಚೆಕ್​ ವಿತರಿಸಿದರು.

ಆರ್.ವಿ ದೇಶಪಾಂಡೆ ಪರಿಹಾರ ವನ್ನು ವಿತರಿಸಿದರು

ಇಂದು ಕಲಬುರಗಿಗೆ ಭೇಟಿ ನೀಡಿರುವ ಸಚಿವರು, ಕಳೆದ ಜೂನ್ 28ರಂದು ಛತ್ತೀಸ್​ಗಢ ಬಿಜಾಪುರನಲ್ಲಿ ನಕ್ಸಲ್ ದಾಳಿಗೆ ಹುತಾತ್ಮ ವೀರಯೋಧ ಮಹಾದೇವ ಪೊಲೀಸ್​ ಪಾಟೀಲ್ ಅವರ ಕುಟುಂಬಕ್ಕೆ ಸರ್ಕಾರದ ವತಿಯಿಂದ 25ಲಕ್ಷ ರೂಪಾಯಿ ಚೆಕ್ ವಿತರಿಸಿ ಸಾಂತ್ವನ ಹೇಳಿದ್ರು.

ಚೆಕ್ ಪಡೆಯಲು ಬಂದಿದ್ದ ಯೋಧ ಮಹಾದೇವ ಅವರ ಪುತ್ರ ಸಂದೀಪ್ ಪೊಲೀಸ್ ಪಾಟೀಲ್ ಅವರಿಗೆ ಧೈರ್ಯ ಕಳೆದುಕೊಳ್ಳದಂತೆ ಆತ್ಮವಿಶ್ವಾಸ ತುಂಬಿದರು. ಈ ವೇಳೆ ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್​ ಖರ್ಗೆ ಹಾಗೂ ಜಿಲ್ಲಾಧಿಕಾರಿ ಆರ್ ವೆಂಕಟೇಶ್ ಕುಮಾರ್, ಚಿಂಚೋಳಿ ಶಾಸಕ ಅವಿನಾಶ್ ಜಾಧವ್ ಉಪಸ್ಥಿತರಿದ್ದರು.

For All Latest Updates

TAGGED:

kalburgi

ABOUT THE AUTHOR

...view details