ಕರ್ನಾಟಕ

karnataka

By

Published : Jun 5, 2020, 3:35 PM IST

ETV Bharat / state

ರಾಣೆಬೆನ್ನೂರಿನಲ್ಲಿ ಸಸಿ ನೆಟ್ಟು ವಿಶ್ವ ಪರಿಸರ ದಿನಾಚರಣೆ

ನಗರದ ಪ್ರಾದೇಶಿಕ ಅರಣ್ಯ ವಲಯದಿಂದ ನಗರದ ಕೆ.ಎಚ್.ಬಿ.ಕಾಲೋನಿಯಲ್ಲಿ ಸಸಿ ನೆಡುವ ಮೂಲಕ ವಿಶ್ವ ಪರಿಸರ ದಿನ ಆಚರಿಸಲಾಯಿತು.

World environment day
World environment day

ರಾಣೆಬೆನ್ನೂರು:ತಾಲೂಕು ಆಡಳಿತ ಮತ್ತು ಅರಣ್ಯ ಇಲಾಖೆಯಿಂದ ಇಂದು ವಿಶ್ವ ಪರಿಸರ ದಿನ ಆಚರಿಸಲಾಯಿತು.

ರಾಣೆಬೆನ್ನೂರು ನಗರದ ಪ್ರಾದೇಶಿಕ ಅರಣ್ಯ ವಲಯದಿಂದ ನಗರದ ಕೆ.ಎಚ್.ಬಿ.ಕಾಲೋನಿಯಲ್ಲಿ ಸಸಿ ನೆಡುವ ಮೂಲಕ ವಿಶ್ವ ಪರಿಸರ ದಿನ ಆಚರಿಸಲಾಯಿತು.

ತಹಶೀಲ್ದಾರ್​ ಬಸನಗೌಡ ಕೊಟೂರು ಮಾತನಾಡಿ, ದೇಶದಲ್ಲಿ ಅರಣ್ಯ ಸಂಪತ್ತನ್ನು ಸಾರ್ವಜನಿಕರು ಉಳಿಸಬೇಕಾಗಿದೆ‌. ಈ ನಡುವೆ ಪ್ರಕೃತಿ ಮೇಲೆ ಅನೇಕ ಪರಿಣಾಮ ಬೀರುತ್ತಿದ್ದು, ಪರಿಸರ ನಾಶವಾಗುತ್ತಿದೆ. ಇಂದು ದೇಶಾದ್ಯಂತ ಹಸಿರು ಆಂದೋಲನ ನಡೆಯುತ್ತಿದ್ದು, ನಾವುಗಳು ಹಸಿರು ಉಳಿಸುವ ಕಾರ್ಯ ಮಾಡಬೇಕು ಎಂದರು.

ಕಾರ್ಯಕ್ರಮದಲ್ಲಿ ಶಾಸಕ ಅರುಣಕುಮಾರ ಪೂಜಾರ, ನಗರ ಪ್ರಾಧಿಕಾರ ಅಧ್ಯಕ್ಷ ಚೋಳಪ್ಪ ಕಸವಾಳ, ಆರ್​​​ಎಫ್​​​​ಒ ರವಿ ಹುಲಕೋಟಿ, ಇಒ ಎಸ್.ಎಮ್.ಕಾಂಬಳೆ, ತಾಪಂ ಅಧ್ಯಕ್ಷ ಗೀತಾ ಲಮಾಣಿ ಹಾಜರಿದ್ದರು.

ABOUT THE AUTHOR

...view details