ಹಾವೇರಿ: ಜಿಲ್ಲೆಯಿಂದ ಗುತ್ತಲ ಸಂಪರ್ಕಿಸುವ ರಸ್ತೆಯನ್ನ ದ್ವಿಪಥವಾಗಿ ನಿರ್ಮಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ನಗರದ ರಸ್ತೆ ಬದಿಯಲ್ಲಿ ಇರುವ ಮರಗಳನ್ನು ಮಾರಣಹೋಮ ಮಾಡಲಾಗುತ್ತಿದೆ. ಶಿವಲಿಂಗ ನಗರದಿಂದ ಹುಕ್ಕೇರಿ ಮಠದವರೆಗೆ 25 ಕ್ಕೂ ಅಧಿಕ ಮರಗಳನ್ನು ಕಡಿಯಲಾಗಿದೆ.
ಹುಣಸೆ, ಅಕೇಶಿಯಾ ಸೇರಿದಂತೆ ವಿವಿಧ ಜಾತಿಯ ಮರಗಳನ್ನ ಕತ್ತರಿಸಲಾಗಿದೆ. ಈ ಮರಗಳನ್ನು ಕಡಿದು ರಸ್ತೆಯ ಅಕ್ಕಪಕ್ಕದಲ್ಲಿ ಹಾಕಲಾಗಿದೆ. ಶನಿವಾರದಿಂದ ಈ ಮರಗಳ ತುಂಡುಗಳನ್ನು ಅಡ್ಡೆಗಳಿಗೆ ಕಳಿಸಲಾಗುತ್ತಿದೆ. ಅಷ್ಟೇ ಅಲ್ಲದೆ, ಕ್ರೇನ್ ಮತ್ತು ಜೆಸಿಬಿ ಮೂಲಕ ಮರದ ಕಾಂಡಗಳನ್ನು ಬೇರೆಡೆಗೆ ಸ್ಥಳಾಂತರಿಸಲಾಗುತ್ತದೆ.