ಹಾವೇರಿ :ದೇವಸ್ಥಾನದ ಬಾಗಿಲು ಮುರಿದು ಕಳ್ಳರು ದೇವರ ಮೈಮೇಲಿನ ಚಿನ್ನಾಭರಣ ಹಾಗೂ ಕಾಣಿಕೆ ಡಬ್ಬಿ ಹೊತ್ತೊಯ್ದ ಘಟನೆ ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಆಡೂರು ಗ್ರಾಮದ ಶ್ರೀ ಮಾಲತೇಶ ದೇವಸ್ಥಾನದಲ್ಲಿ ನಡೆದಿದೆ.ರಾತ್ರಿ ದೇವಸ್ಥಾನಕ್ಕೆ ನುಗ್ಗಿರೋ ಕಳ್ಳರು ಬಾಗಿಲು ಮುರಿದು ಒಳ ಪ್ರವೇಶಿಸಿದ್ದಾರೆ. ಕಾಣಿಕೆ ಹುಂಡಿ ಹೊತ್ತೊಯ್ದಿದ್ದಾರೆ. ಅದರಲ್ಲಿದ್ದ ಹಣವನ್ನು ದೋಚಿ ನಂತರ ದೇವಸ್ಥಾನದ ಸಮೀಪದಲ್ಲಿ ಹುಂಡಿ ಎಸೆದು ಹೋಗಿದ್ದಾರೆ.
ದೇವಸ್ಥಾನದೊಳಕ್ಕೆ ನುಗ್ಗಿ ದೇವರ ಆಭರಣ, ಕಾಣಿಕೆ ಹುಂಡಿ ಹೊತ್ತೊಯ್ದ ಖದೀಮರು..
ದೇವಸ್ಥಾನದ ಬಾಗಿಲು ಮುರಿದು ಕಳ್ಳರು ದೇವರಿಗೆ ಹಾಕಿದ್ದ ಚಿನ್ನಾಭರಣ ಹಾಗೂ ಕಾಣಿಕೆ ಡಬ್ಬಿ ಹೊತ್ತೊಯ್ದ ಘಟನೆ ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಆಡೂರು ಗ್ರಾಮದಲ್ಲಿ ನಡೆದಿದೆ. ಗ್ರಾಮದ ಮಾಲತೇಶ ದೇವಸ್ಥಾನಕ್ಕೆ ರಾತ್ರಿ ನುಗ್ಗಿದ್ದ ಕಳ್ಳರು ಬಾಗಿಲು ಮುರಿದು ಹುಂಡಿ ಕದ್ದು ಪರಾರಿಯಾಗಿದ್ದಾರೆ.
ಮಾಲತೇಶ ದೇವಸ್ಥಾನ
ಸುಮಾರು ಇಪ್ಪತ್ತೈದು ಸಾವಿರಕ್ಕೂ ಅಧಿಕ ನಗದು ಮತ್ತು ಚಿನ್ನಾಭರಣ ಕಳ್ಳತನ ಆಗಿದೆ ಎನ್ನಲಾಗಿದೆ. ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಆಡೂರು ಠಾಣೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಆಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.