ಹಾವೇರಿ:ಹೊಲದಲ್ಲಿ ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗದ ಹಿನ್ನೆಲೆ ರೈತರಿಬ್ಬರು ಮೂರೂವರೆ ಎಕರೆಯಲ್ಲಿ ಬೆಳೆದಿದ್ದ ಎಲೆಕೋಸು ಬೆಳೆಯನ್ನು ನಾಶ ಮಾಡಿರುವ ಘಟನೆ ಜಿಲ್ಲೆಯ ಹಿರೇಕೆರೂರು ತಾಲೂಕಿನ ಭೋಗಾವಿಯಲ್ಲಿ ನಡೆದಿದೆ.
ಎಲೆಕೋಸಿಗೆ ಬೆಲೆ ಸಿಗದೆ ಬೆಳೆಯನ್ನೇ ನಾಶ ಮಾಡಿದ ರೈತರು - ಹಾವೇರಿ ಕ್ಯಾಬೇಜ್ ಬೆಳೆ ನಾಶಪಡಿಸಿದ ರೈತರು
ಕೊರೊನಾದಿಂದಾಗಿ ಹೊಲದಲ್ಲಿ ಬೆಳೆದಿದ್ದ ಎಲೆಕೋಸು ಬೆಳೆಗೆ ಸರಿಯಾದ ಬೆಲೆ ದೊರೆಯದ ಕಾರಣ ಬೇಸರಗೊಂಡ ರೈತರಿಬ್ಬರು, ಬೆಳೆದ ಬೆಳೆಯನ್ನೆಲ್ಲಾ ನಾಶ ಮಾಡಿದ್ದಾರೆ.

ಕ್ಯಾಬೇಜ್ ಬೆಳೆ ನಾಶಪಡಿಸುತ್ತಿರುವ ರೈತರು
ಎಲೆಕೋಸು ಬೆಳೆ ನಾಶ ಮಾಡುತ್ತಿರುವ ರೈತರು
ಕೊರೊನಾದಿಂದಾಗಿ ಎಲೆಕೋಸಿಗೆ ಮಾರುಕಟ್ಟೆಯಲ್ಲಿ ಬೆಲೆ ಇಲ್ಲ. ಬೆಳೆ ಮಾರಿದರೆ ಅದಕ್ಕೆ ಸಿಂಪಡಿಸಿದ ಕ್ರಿಮಿನಾಶಕದ ಖರ್ಚೂ ಬರುವುದಿಲ್ಲ. ಕೊರೊನಾ ಇರುವುದರಿಂದ ವ್ಯಾಪಾರಸ್ಥರು ಸಹ ಈ ಕಡೆ ಮುಖ ಮಾಡುತ್ತಿಲ್ಲ. ಹೀಗಾಗಿ ಎಕರೆಗೆ 25 ಸಾವಿರ ರೂಪಾಯಿ ಖರ್ಚು ಮಾಡಿ ಬೆಳೆದ ಬೆಳೆಯನ್ನು ರೈತರು ನಾಶ ಮಾಡಿದ್ದಾರೆ.
ಶಿವಪ್ಪ ಮುತ್ತಿಗಿ ಮತ್ತು ಪರಮೇಶಪ್ಪ ಎಂಬ ಇಬ್ಬರು ರೈತರು ತಾವು ಬೆಳೆದಿದ್ದ ಎಲೆಕೋಸು ಬೆಳೆಯನ್ನು ಟ್ರ್ಯಾಕ್ಟರ್ ಮೂಲಕ ನಾಶ ಮಾಡಿದ್ದಾರೆ.