ಕರ್ನಾಟಕ

karnataka

By

Published : Sep 25, 2020, 5:59 PM IST

ETV Bharat / state

ಜಾನುವಾರುಗಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ: ಶಾಸಕ ಸಿ.ಎಂ.ಉದಾಸಿ

ಹಾನಗಲ್​ ತಾಲೂಕಿನ ಕೆಲ ಗ್ರಾಮಗಳಲ್ಲಿನ ದನ - ಕರುಗಳಿಗೆ ಚರ್ಮ ಗಂಟು ಎಂಬ ರೋಗ ವ್ಯಾಪಿಸತೊಡಗಿದ್ದು, ಜಾನುವಾರುಗಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವ ಅಗತ್ಯತೆ ಇದೆ ಎಂದು ಶಾಸಕ ಸಿ.ಎಂ.ಉದಾಸಿ ತಿಳಿಸಿದ್ದಾರೆ.

C.M.Udasi
ಸಿ.ಎಂ.ಉದಾಸಿ

ಹಾನಗಲ್​:ತಾಲೂಕಿನ ಕೆಲ ಗ್ರಾಮಗಳಲ್ಲಿನ ಹಸುಗಳಿಗೆ ಚರ್ಮ ಗಂಟು(ಲಂಪಿ ಸ್ಕಿನ್ ಡಿಸಿಸ್) ರೋಗ ಕಾಣಿಸಿಕೊಳ್ಳತೊಡಗಿದ್ದು, ನಿಮ್ಮ ಜಾನುವಾರುಗಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ಎಂದು ಶಾಸಕ ಸಿ.ಎಂ.ಉದಾಸಿ ಸಲಹೆ ನೀಡಿದ್ದಾರೆ.

ಚರ್ಮ ಗಂಟು ರೋಗ ವೈರಸ್​ನಿಂದಾಗಿ ದನ - ಕರುಗಳಿಗೆ ಹರಡುತ್ತಿದ್ದು, ಜಾನುವಾರುಗಳಿಗೆ ಕಚ್ಚುವ ನೊಣಗಳಿಂದ, ಉಣ್ಣೆಗಳಿಂದ ಹಾಗೂ ರೋಗವಿರುವ ಪ್ರಾಣಿಗಳ ನೇರ ಸಂಪರ್ಕದಿಂದಲೂ ಈ ರೋಗ ಹರಡುತ್ತದೆ. ಮಾತ್ರವಲ್ಲದೇ, ಕಲುಷಿತ ನೀರು ಹಾಗೂ ಮೇವಿನಿಂದಲೂ ಈ ರೋಗ ಹರಡುವ ಸಾಧ್ಯತೆಯಿದೆ. ಆದ್ದರಿಂದ ನಿಮ್ಮ ಜಾನುವಾರುಗಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ, ದನ-ಕರುಗಳನ್ನು ಸುರಕ್ಷಿಸಿಕೊಳ್ಳುವುದು ನಮ್ಮ ನಿಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಇದೇ ವೇಳೆ ಉದಾಸಿ ತಿಳಿಸಿದ್ದಾರೆ.

ತಾಲೂಕಿನಲ್ಲಿ ಪಶು ವೈದ್ಯಾಧಿಕಾರಿಗಳು ಈಗಾಗಲೇ ಗ್ರಾಮಗಳಿಗೆ ತೆರಳಿ ತಪಾಸಣೆ ಮಾಡುತಿದ್ದು, ರೈತರು ಯಾವುದೇ ರೀತಿಯ ಆತಂಕ ಪಡುವ ಅಗತ್ಯ ಇಲ್ಲ ಎಂದು ಇದೇ ವೇಳೆ, ಮಾಹಿತಿ ನೀಡಿದ್ದಾರೆ.

ABOUT THE AUTHOR

...view details