ಕರ್ನಾಟಕ

karnataka

ETV Bharat / state

ಲಂಚ ಕೇಳದ ಆರೋಪ: ಪಿಡಿಓ ಎಸಿಬಿ ಬಲೆಗೆ - ಅತ್ತಿಗೇರಿ ಗ್ರಾಮದ ಗುತ್ತಿಗೆದಾರ ಮಹೇಶ ಸಾಲಮನಿ

ಗುತ್ತಿಗೆದಾರನ ಬಿಲ್ ಪಾವತಿಸಲು ಲಂಚ ಕೇಳಿದ್ದರೆನ್ನಲಾದ ಪಿಡಿಓ ಎಸಿಬಿ ಬಲೆಗೆ ಬಿದ್ದ ಘಟನೆ ಹಾವೇರಿ ಜಿಲ್ಲೆಯಲ್ಲಿ ನಡೆಯಿದೆ.

Shiggavi: PDO who was doing corruption is in to ACB trap
ಶಿಗ್ಗಾವಿ: ಲಂಚಕ್ಕೆ ಕೈ ಒಡ್ಡಿದ ಪಿಡಿಓ ಎಸಿಬಿ ಬಲೆಗೆ

By

Published : Dec 12, 2019, 9:56 PM IST

ಹಾವೇರಿ:ಗುತ್ತಿಗೆದಾರನ ಬಿಲ್ ಪಾವತಿಸಲು ಲಕ್ಷಾಂತರ ರೂಪಾಯಿ ಹಣದ ಬೇಡಿಕೆ ಇಟ್ಟಿದ್ದರೆನ್ನಲಾದ ಪಿಡಿಓ ಎಸಿಬಿ ಬಲೆಗೆ ಬಿದ್ದ ಘಟನೆ ಹಾವೇರಿ ಜಿಲ್ಲೆಯಲ್ಲಿ ನಡೆಯಿದೆ.

ಶಿಗ್ಗಾವಿ: ಪಿಡಿಓ ಎಸಿಬಿ ಬಲೆಗೆ

ಶಿಗ್ಗಾವಿ ತಾಲೂಕಿನ ಅತ್ತಿಗೇರಿ ಗ್ರಾಪಂ​ನ ಶಿವಾನಂದ ಹಡಪದ ಎಂಬಾತ ಎಸಿಬಿ ಬಲೆಗೆ ಬಿದ್ದವರು ಎಂದು ತಿಳಿದುಬಂದಿದೆ. ಅತ್ತಿಗೇರಿ ಗ್ರಾಮದ ಗುತ್ತಿಗೆದಾರ ಮಹೇಶ ಸಾಲಮನಿ ಎಂಬುವವರಿಗೆ ಬಿಲ್ ಪಾವತಿಸಲು ಒಂದೂವರೆ ಲಕ್ಷ ರೂಪಾಯಿ ಬೇಡಿಕೆ ಇಟ್ಟಿದ್ದರಂತೆ. ಅಂತೆಯೇ ಇಂದು ಗುತ್ತಿಗೆದಾರ ಮಹೇಶ್​ ಎಂಬಾತ 50 ಸಾವಿರ ರೂಪಾಯಿ ಹಣ ನೀಡುತ್ತಿದ್ದಾಗ ಎಸಿಬಿ ಅಧಿಕಾರಿಗಳು ದಾಳಿ ಮಾಡಿದ್ದಾರೆ.

ಗ್ರಾಪಂನ ವಿವಿಧ ಗುತ್ತಿಗೆ ಕೆಲಸಗಳಲ್ಲಿ ಮಹೇಶನಿಗೆ ಗ್ರಾಮ ಪಂಚಾಯತ್ 6 ಲಕ್ಷಕ್ಕೂ ಅಧಿಕ ಹಣ ನೀಡುವುದು ಬಾಕಿ ಇತ್ತಂತೆ. ಈ ಹಿನ್ನೆಲೆಯಲ್ಲಿ ಮಹೇಶ್​ ಬಿಲ್ ಪಾವತಿಸಲು ಕೇಳಿದಾಗ ಶಿವಾನಂದ ಒಂದೂವರೆ ಲಕ್ಷ ರೂಪಾಯಿ ಹಣದ ಬೇಡಿಕೆ ಇಟ್ಟಿದ್ದ ಎನ್ನಲಾಗಿದೆ. ಈ ಕುರಿತಂತೆ ಹಾವೇರಿ ಎಸಿಬಿ ಕಚೇರಿಯಲ್ಲಿ ಪ್ರಕರಣ ದಾಖಲಾಗಿದ್ದು, ಪಿಡಿಓನನ್ನು ವಶಕ್ಕೆ ಪಡೆಯಲಾಗಿದೆ.

ABOUT THE AUTHOR

...view details