ಕರ್ನಾಟಕ

karnataka

ETV Bharat / state

ರಾಜ್ಯ ಸರ್ಕಾರದ ಪರ್ಸೆಂಟೇಜ್ ಪತ್ರಕ್ಕೆ ಮೋದಿ ಉತ್ತರ ಏನು : ಸಲೀಂ ಅಹ್ಮದ್ ಪ್ರಶ್ನೆ - ಮೋದಿಗೆ ರಾಜ್ಯದ ಗುತ್ತಿಗೆದಾರ ಪತ್ರ

ಪ್ರಧಾನಿ ನರೇಂದ್ರ ಮೋದಿಗೆ ರಾಜ್ಯದ ಗುತ್ತಿಗೆದಾರರು ಪತ್ರ ಬರೆದಿರುವುದು ನಾಚಿಕೆಗೇಡಿನ ಸಂಗತಿ. ಈ ಪತ್ರಕ್ಕೆ ಪ್ರಧಾನಿ ಕಚೇರಿ ಯಾವ ಕ್ರಮ ಕೈಗೊಂಡಿದೆ?, ಪರ್ಸೆಂಟೇಜ್ ಯಾವ ಸರ್ಕಾರದಲ್ಲಿದ್ದರು ಅದಕ್ಕೆ ತನಿಖಾಯೋಗ ರಚಿಸಿ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಆಗ್ರಹಿಸಿದರು..

saleem-ahmed
ಸಲೀಂ ಅಹ್ಮದ್

By

Published : Nov 27, 2021, 10:50 PM IST

ಹಾವೇರಿ : 56 ಇಂಚಿನ ಎದೆ ಇದೆ ಎನ್ನುವ ಪ್ರಧಾನಿ ನರೇಂದ್ರ ಮೋದಿ ರಾಜ್ಯ ಸರ್ಕಾರದ ಪರ್ಸೆಂಟೇಜ್ ಪತ್ರಕ್ಕೆ ಏನು ಕ್ರಮಕೈಗೊಂಡಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಪ್ರಶ್ನಿಸಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿಗೆ ರಾಜ್ಯದ ಗುತ್ತಿಗೆದಾರರು ಪತ್ರ ಬರೆದಿರುವುದು ನಾಚಿಕೆಗೇಡಿನ ಸಂಗತಿ. ಈ ಪತ್ರಕ್ಕೆ ಪ್ರಧಾನಿ ಕಚೇರಿ ಯಾವ ಕ್ರಮಕೈಗೊಂಡಿದೆ?. ತಮ್ಮ ಮೇಲೆ ಬಂದಿರುವ ಆರೋಪಕ್ಕೆ ಬಿಜೆಪಿಯವರು ಪರ್ಸೆಂಟೇಜ್ ಜನಕ ಕಾಂಗ್ರೆಸ್​ ಎನ್ನುವ ಮೂಲಕ ಜನರನ್ನು ತಪ್ಪುದಾರಿಗೆ ಎಳೆಯುತ್ತಿದ್ದಾರೆ ಎಂದು ಸಲೀಂ ಅಹ್ಮದ್ ಅಭಿಪ್ರಾಯಪಟ್ಟರು.

ರಾಜ್ಯ ಸರ್ಕಾರದ ಪರ್ಸೆಂಟೇಜ್ ಪತ್ರಕ್ಕೆ ಮೋದಿ ಉತ್ತರ ಏನು ಎಂದು ಸಲೀಂ ಅಹ್ಮದ್ ಪ್ರಶ್ನಿಸಿರುವುದು..

ಪರ್ಸೆಂಟೇಜ್ ಯಾವ ಸರ್ಕಾರದಲ್ಲಿದ್ದರು ಅದಕ್ಕೆ ತನಿಖಾಯೋಗ ರಚಿಸಿ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ಅದು ಯಾವ ಪಕ್ಷದವರೇ ಇರಲಿ ಅವರ ಮೇಲೆ ಕ್ರಮ ಕೈಗೊಳ್ಳಲಿ. ಕಾಂಗ್ರೆಸ್ ಇದ್ದರೆ ಬಿಜೆಪಿ ಮುಖಂಡರು ದಾಖಲಾತಿಗಳ ಬಿಡುಗಡೆ ಮಾಡುವಂತೆ ಸಲೀಂ ಅಹ್ಮದ್ ಒತ್ತಾಯಿಸಿದರು. ಅಲ್ಲದೆ, ಕಾಂಗ್ರೆಸ್ ಪಕ್ಷ ತೆರೆದ ಪುಸ್ತಕ ನಾವು ಏನು ಮರೆಮಾಚುವದಿಲ್ಲಾ ಎಂದು ಸಲೀಂ ಅಹ್ಮದ್ ತಿಳಿಸಿದರು.

ಇದೇ ವೇಳೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ರಾಜ ಸಾಮಂತರ ರಾಜರು ಹೇಳಿಕೆಗೆ ಸಲೀಂ ಅಹ್ಮದ್ ಪ್ರತಿಕ್ರಿಯೆ ನೀಡಿದರು. ಸಿ.ಟಿ.ರವಿ ಯಾವ ಟೈಮಲ್ಲಿ ಏನು ಹೇಳುತ್ತಾರೆ ಎಂಬುದು ನಮಗೆ ಅರ್ಥವಾಗುತ್ತಿಲ್ಲಾ. ನಿನ್ನೆ ಮೊನ್ನೆ ಕಣ್ಬಿಟ್ಟ ಸಿ.ಟಿ.ರವಿ ಕಾಂಗ್ರೆಸ್ ಮುಖಂಡರ ಬಗ್ಗೆ ತಿಳಿದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಜವಾಹರಲಾಲ್ ನೆಹರು, ಇಂದಿರಾಗಾಂಧಿ, ರಾಜೀವ್ ಗಾಂಧಿ ಬಲಿದಾನದ ಬಗ್ಗೆ ಇವರಿಗೆ ಏನ್​ ಗೊತ್ತು. ಬಿಜೆಪಿಯ ಒಬ್ಬನೇ ಒಬ್ಬ ಮುಖಂಡ ದೇಶಕ್ಕಾಗಿ ಏನು ತ್ಯಾಗ ಬಲಿದಾನ ಮಾಡಿದ್ದಾರೆ ಎಂದು ಹೇಳಲಿ. ರವಿ ಗೌರವಯುತ ಸ್ಥಾನದಲ್ಲಿದ್ದಾರೆ.

ಮಾತನಾಡಬೇಕಾದರೆ ವಿಚಾರ ಮಾಡಬೇಕು. ತಮ್ಮ ಬಗ್ಗೆ ಅವರು ಮಾತನಾಡಲಿ ಬೇರೆಯವರ ಯೋಗ್ಯತೆ ಬಗ್ಗೆ ಮಾತನಾಡುವ ಕುರಿತಂತೆ ವಿಚಾರ ಮಾಡಬೇಕು ಎಂದು ಸಲೀಂ ಅಹ್ಮದ್ ತಿಳಿಸಿದರು.

ABOUT THE AUTHOR

...view details