ಹಾವೇರಿ:ಜಿಲ್ಲೆಯಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದ್ದ 21 ಜನರ ವರದಿ ಕೊನೆಗೂ ನೆಗೆಟಿವ್ ಬಂದಿದೆ. ಈ ಮೂಲಕ ಜಿಲ್ಲೆಯ ಜನತೆ ನಿಟ್ಟುಸಿರು ಬಿಟ್ಟಿದ್ದಾರೆ. ಇಲ್ಲಿನ ಹಾನಗಲ್ ತಾಲೂಕಿನ ಆಡೂರು ಗ್ರಾಮದ 21 ಜನರ ಗಂಟಲು ದ್ರವವನ್ನು ಪರೀಕ್ಷೆಗಾಗಿ ಕಳುಹಿಸಲಾಗಿತ್ತು. ಸದ್ಯ ಈ 21 ಜನರ ವರದಿಯೂ ನೆಗೆಟಿವ್ ಬಂದಿದೆ ಎಂದು ಜಿಲ್ಲಾಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ನಾಗರಾಜ್ ಮಾಹಿತಿ ನೀಡಿದ್ದಾರೆ.
ಆತಂಕ ಸೃಷ್ಟಿಸಿದ್ದ 21 ಜನರ ವರದಿ ನೆಗೆಟಿವ್: ನಿರಾಳರಾದ ಹಾವೇರಿ ಜನತೆ - 21 ಜನರ ವರದಿ ನೆಗೆಟಿವ್
21 ಸದಸ್ಯರನ್ನು ಹಾವೇರಿಯ ಹೊರವಲಯದಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ಈ ಕುರಿತಂತೆ ಭಾನುವಾರ 21 ಜನರ ರಕ್ತ ಮತ್ತು ಗಂಟಲು ದ್ರವದ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಸದ್ಯ ಇಂದು ಇವರೆಲ್ಲರ ವರದಿ ನೆಗೆಟಿವ್ ಬಂದಿದ್ದು, ಜಿಲ್ಲೆಯ ಜನರ ಆತಂಕ ದೂರಾದಂತಾಗಿದೆ.
![ಆತಂಕ ಸೃಷ್ಟಿಸಿದ್ದ 21 ಜನರ ವರದಿ ನೆಗೆಟಿವ್: ನಿರಾಳರಾದ ಹಾವೇರಿ ಜನತೆ Report of 21 people who have caused anxiety in Haveri is Negative](https://etvbharatimages.akamaized.net/etvbharat/prod-images/768-512-6886246-966-6886246-1587481180868.jpg)
ಇಲ್ಲಿನ ಆಡೂರು ಗ್ರಾಮದ ಬಿಜಾಪುರ ಎಂಬುವವರ ಮನೆಗೆ ವಿಜಯಪುರದ ಕೊರೊನಾ ಸೋಂಕಿತ 306 ಮತ್ತು 308 ಸಂಖ್ಯೆಯ ರೋಗಿಗಳು ಭೇಟಿ ನೀಡಿದ್ದರು. ಇವರಿಬ್ಬರಿಗೆ ಕೊರೊನಾ ದೃಢಪಟ್ಟ ಬೆನ್ನಲ್ಲೇ ಅವರ ಟ್ರಾವಲ್ ಹಿಸ್ಟರಿ ಪರಿಶೀಲಿಸಿದಾಗ ಅವರಿಬ್ಬರು ಆಡೂರಿನ ಈ ಕುಟುಂಬಸ್ಥರನ್ನು ಭೇಟಿಯಾಗಿದ್ದು ಪತ್ತೆಯಾಗಿತ್ತು. ಈ ಹಿನ್ನೆಲೆ ಕುಟುಂಬದ 21 ಸದಸ್ಯರ ರಕ್ತ ಹಾಗೂ ಗಂಟಲು ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು.
ಅಲ್ಲದೆ 21 ಸದಸ್ಯರನ್ನು ಹಾವೇರಿಯ ಹೊರವಲಯದಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ಈ ಕುರಿತಂತೆ ಭಾನುವಾರ 21 ಜನರ ರಕ್ತ ಮತ್ತು ಗಂಟಲು ದ್ರವದ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಸದ್ಯ ಇಂದು ಇವರೆಲ್ಲರ ವರದಿ ನೆಗೆಟಿವ್ ಬಂದಿದ್ದು, ಜಿಲ್ಲೆಯ ಜನರ ಆತಂಕ ದೂರಾದಂತಾಗಿದೆ.