ರಾಣೆಬೆನ್ನೂರು: ನಗರಸಭೆ ಅಧಿಕಾರಕ್ಕಾಗಿ ಬಿಜೆಪಿ-ಕೆಪಿಜೆಪಿ ಸದಸ್ಯರ ಒಗ್ಗಟ್ಟಿನ ನಡುವೆ ಅಧಿಕಾರ ಪಡೆದಿದೆ. ಆದರೆ, ಕೆಪಿಜೆಪಿ ಸದಸ್ಯರೊಬ್ಬರು ಸಿಎಂ ಯಡಿಯೂರಪ್ಪರನ್ನ ಭೇಟಿ ಮಾಡಿಸಿದರೂ ಕೂಡ ಕಾಂಗ್ರೆಸ್ಗೆ ಬೆಂಬಲ ನೀಡಿದ್ದಾರೆ.
ರಾಣೆಬೆನ್ನೂರು: ಸಿಎಂ ಮನವಿ ಮಾಡಿದರೂ 'ಕಮಲ' ಬಿಟ್ಟು 'ಕೈ' ಹಿಡಿದ ನಗರಸಭೆ ಸದಸ್ಯ - Municipality Authority bjp rule news
ರಾಣೆಬೆನ್ನೂರು ನಗರಸಭೆಯ 34ನೇ ವಾರ್ಡ್ ಕೆಪಿಜೆಪಿ ಸದಸ್ಯ ನಿಂಗರಾಜ ಕೋಡಿಹಳ್ಳಿ, ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಿ ಅಚ್ಚರಿ ಮೂಡಿಸಿದರು. ಇದರಿಂದ ಕೇವಲ 9 ಸದಸ್ಯರು ಹೊಂದಿದ್ದ ಕಾಂಗ್ರೆಸ್ ಪಕ್ಷಕ್ಕೆ 10 ಸದಸ್ಯರ ಬೆಂಬಲ ಸಿಕ್ಕಂತಾಯಿತು.
![ರಾಣೆಬೆನ್ನೂರು: ಸಿಎಂ ಮನವಿ ಮಾಡಿದರೂ 'ಕಮಲ' ಬಿಟ್ಟು 'ಕೈ' ಹಿಡಿದ ನಗರಸಭೆ ಸದಸ್ಯ Ranebennur Municipality Authority bjp rule news](https://etvbharatimages.akamaized.net/etvbharat/prod-images/768-512-9391984-thumbnail-3x2-hvr.jpg)
ರಾಣೆಬೆನ್ನೂರು ನಗರಸಭೆಯ 34ನೇ ವಾರ್ಡ್ ಕೆಪಿಜೆಪಿ ಸದಸ್ಯ ನಿಂಗರಾಜ ಕೋಡಿಹಳ್ಳಿ, ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಿ ಅಚ್ಚರಿ ಮೂಡಿಸಿದರು. ವಿಧಾನ ಪರಿಷತ್ ಸದಸ್ಯ ಆರ್.ಶಂಕರ್, ಕೆಪಿಜೆಪಿಯ ಎಲ್ಲಾ 10 ಸದಸ್ಯರನ್ನು ಬೆಂಗಳೂರಿಗೆ ಕರೆದುಕೊಂಡು ಹೋಗಿದ್ದರು. ಈ ನಡುವೆ ಬಿಜೆಪಿ ಸೇರಿರುವ ಆರ್.ಶಂಕರ್ ನಿನ್ನೆ ಸಿಎಂ ಬಿ.ಎಸ್.ಯಡಿಯೂರಪ್ಪ ನವರಿಗೆ ಕೆಪಿಜೆಪಿಯ ಎಲ್ಲಾ ಸದಸ್ಯರನ್ನು ಭೇಟಿ ಮಾಡಿಸಿದ್ದರು. ಅಲ್ಲದೇ ಸಿಎಂ ಕೂಡ ಬಿಜೆಪಿ ಬೆಂಬಲಿಸುವಂತೆ ಮನವಿ ಮಾಡಿದ್ದಾರೆ.
ಆದರೆ, ಕೆಪಿಜೆಪಿ ಸದಸ್ಯ ಕೋಡಿಹಳ್ಳಿಯವರು 9 ಜನ ಹೊರತುಪಡಿಸಿ ತಾವೊಬ್ಬರು ಮಾತ್ರ ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ ನೀಡಿದ್ದಾರೆ. ಇದರಿಂದ ಕೇವಲ 9 ಸದಸ್ಯರು ಹೊಂದಿದ್ದ ಕಾಂಗ್ರೆಸ್ ಪಕ್ಷಕ್ಕೆ 10 ಸದಸ್ಯರ ಬೆಂಬಲ ಸಿಕ್ಕಂತಾಯಿತು. ಆದರೆ, ಬಿಜೆಪಿ-ಕೆಪಿಜೆಪಿ ಮೈತ್ರಿಯಿಂದ ನಗರಸಭೆ ಗದ್ದುಗೆ ಬಿಜೆಪಿ ಪಾಲಾಗಿದೆ.