ETV Bharat Karnataka

ಕರ್ನಾಟಕ

karnataka

ETV Bharat / state

ಬಸವೇಶ್ವರ ಜಾತ್ರೆಯ ಅಂಗವಾಗಿ ಟಗರು ಕಾಳಗ; ಇನ್ನೂರಕ್ಕೂ ಅಧಿಕ ಟಗರುಗಳು ಸ್ಪರ್ಧೆಯಲ್ಲಿ ಭಾಗಿ - ಮಾವಿನ ತೋಪು ಬಸವೇಶ್ವರ ಜಾತ್ರೆಯ ಅಂಗವಾಗಿ ಟಗರು ಕಾಳಗ;ಇನ್ನೂರಕ್ಕೂ ಅಧಿಕ ಟಗರು ಭಾಗಿ

ಹಾವೇರಿ ಜಿಲ್ಲೆಯ ಮಾವಿನ ತೋಪು ಗ್ರಾಮದಲ್ಲಿ ಬಸವೇಶ್ವರ ಜಾತ್ರೆಯ ಅಂಗವಾಗಿ ಜಾತ್ರಾ ಮಹೋತ್ಸವ ಕಮಿಟಿಯು ಟಗರಿನ ಕಾಳಗವನ್ನು ಆಯೋಜಿಸಿತ್ತು. ರಾಜ್ಯದ ವಿವಿಧ ಜಿಲ್ಲೆಗಳಿಂದ ಸುಮಾರು ಇನ್ನೂರಕ್ಕೂ ಅಧಿಕ ಟಗರುಗಳನ್ನು ಅಖಾಡಕ್ಕೆ ಬಿಡಲಾಗಿತ್ತು.

ram-fighting-game-held-in-basaveshwara-fair-near-haveri
ಮಾವಿನ ತೋಪು ಬಸವೇಶ್ವರ ಜಾತ್ರೆಯ ಅಂಗವಾಗಿ ಟಗರು ಕಾಳಗ;ಇನ್ನೂರಕ್ಕೂ ಅಧಿಕ ಟಗರು ಸ್ಪರ್ಧೆಯಲ್ಲಿ ಭಾಗಿ
author img

By

Published : Mar 16, 2022, 6:10 PM IST

ಹಾವೇರಿ: ಜಿಲ್ಲೆಯ ರಟ್ಟಿಹಳ್ಳಿ ತಾಲೂಕಿನ ಮಾವಿನತೋಪು ಗ್ರಾಮದಲ್ಲಿ ಬಸವೇಶ್ವರ ಜಾತ್ರೆ ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಜಾತ್ರಾ ಮಹೋತ್ಸವ ಕಮಿಟಿಯು ರಾಜ್ಯಮಟ್ಟದ ಟಗರಿನ ಕಾಳಗ ಸ್ಪರ್ಧೆ ಆಯೋಜಿಸಿತ್ತು. ಈ ಕಾಳಗಕ್ಕೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಜನರು ಆಗಮಿಸಿದ್ದಾರೆ.

ದಾವಣಗೆರೆ, ಶಿವಮೊಗ್ಗ, ಗದಗ, ಶಿರಸಿ ಮತ್ತು ಧಾರವಾಡ ಜಿಲ್ಲೆಯಿಂದ ಇನ್ನೂರಕ್ಕೂ ಅಧಿಕ ಟಗರುಗಳೊಂದಿಗೆ ಮಾಲೀಕರು ಸ್ಪರ್ಧೆಗೆ ಆಗಮಿಸಿದ್ದರು. ತಾವು ಸಾಕಿದ ತಮ್ಮ ನೆಚ್ಚಿನ ಟಗರಿಗೆ ವಿಶೇಷ ಹೆಸರಿಟ್ಟು ಸ್ಪರ್ಧೆಯಲ್ಲಿ ಕಾಳಗಕ್ಕೆ ಬಿಟ್ಟಿದ್ದರು. ಎರಡು ಟಗರುಗಳು ದೂರದಿಂದ ಓಡಿ ಬಂದು ಡಿಕ್ಕಿ ಹೊಡೆಯುವ ದೃಶ್ಯ ಮೈನವಿರೇಳಿಸುವಂತಿತ್ತು. ಹಾಲು ಹಲ್ಲು, ಆರು ಹಲ್ಲು, ನಾಲ್ಕು ಹಲ್ಲು ಮತ್ತು ಎರಡು ಹಲ್ಲು ಎಂಬ ನಾಲ್ಕು ವಿಭಾಗದಲ್ಲಿ ಈ ಟಗರು ಕಾಳಗವನ್ನು ಆಯೋಜಿಸಲಾಗಿತ್ತು.

ಉತ್ತರಕರ್ನಾಟಕದ ಜಾನಪದ ಸೊಗಡಿನ ಕ್ರೀಡೆಗಳಲ್ಲಿ ಟಗರಿನ ಕಾಳಗವೂ ಒಂದು. ಟಗರಿಗೆ ಮಾಲೀಕರು ತಮ್ಮ ನೆಚ್ಚಿನ ಟಗರುಗಳಿಗೆ ಹುರುಳಿ, ಹಿಂಡಿ ಮತ್ತು ಮೊಟ್ಟೆ ಹಾಲು ನೀಡುವ ಮೂಲಕ ಸ್ಪರ್ಧೆಗೆ ಅಣಿಗೊಳಿಸುತ್ತಾರೆ.

ಸ್ಪರ್ಧೆಯಲ್ಲಿ ಗೆದ್ದ ಟಗರುಗಳಿಗೆ ಪ್ರಥಮ ಬಹುಮಾನ 20 ಸಾವಿರ ರೂಪಾಯಿ, ದ್ವಿತೀಯ ಬಹುಮಾನ 10 ಸಾವಿರ ರೂ, ತೃತೀಯ ಬಹುಮಾನ 8 ಸಾವಿರ ರೂಗಳನ್ನು ನಿಗದಿಪಡಿಸಲಾಗಿತ್ತು. ಗ್ರಾಮೀಣ ಸೊಗಡಿನ ಕ್ರೀಡೆಗಳಲ್ಲಿ ಒಂದಾದ ಟಗರು ಸ್ಪರ್ಧೆಯನ್ನು ಪ್ರೋತ್ಸಾಹಿಸಬೇಕು ಎಂದು ಟಗರಿನ ಮಾಲೀಕರು ಹೇಳಿದ್ದಾರೆ.

ಓದಿ :ಕಾಂಗ್ರೆಸ್​ನಲ್ಲಿ ಮತ್ತೆ ಕಿಡಿ ಹೊತ್ತಿಸಿದ ಕಪಿಲ್​ ಸಿಬಲ್​ ಹೇಳಿಕೆ: ಹಿರಿಯ ನಾಯಕನ ವಿರುದ್ಧ ಮುಗಿಬಿದ್ದ ಪಕ್ಷ ನಿಷ್ಠರು

For All Latest Updates

ABOUT THE AUTHOR

...view details