ಕರ್ನಾಟಕ

karnataka

ETV Bharat / state

ಕೊರೊನಾ ಸೋಂಕು ಹತ್ತಿಕ್ಕಲು ಸಾರ್ವಜನಿಕರು ಸಹಕರಿಸಬೇಕು: ತಹಶೀಲ್ದಾರ್ ಮನವಿ

ತಾಲೂಕು ಆಡಳಿತ ಕೈಗೊಳ್ಳುವ ಮುನ್ನೆಚ್ಚರಿಕಾ ಕ್ರಮಗಳಿಗೆ ಸ್ಪಂದಿಸಿ ಸೋಂಕು ತಡೆಗಟ್ಟಲು ಸಹಕರಿಸುವಂತೆ ಇಲ್ಲಿನ ಹಾನಗಲ್​ ತಹಶೀಲ್ದಾರ್​ ಎರ್ರಿಸ್ವಾಮಿ ಮನವಿ ಮಾಡಿದ್ದಾರೆ.

By

Published : May 8, 2020, 10:27 PM IST

Public should cooperation with us for prevent coronavirus Tahsildar appeals
ಕೊರೊನಾ ಸೋಂಕು ಹತ್ತಿಕ್ಕಲು ಸಾರ್ವಜನಿಕರು ಸಹಕರಿಸಿ: ತಹಶೀಲ್ದಾರ್ ಮನವಿ

ಹಾನಗಲ್ (ಹಾವೇರಿ): ಕೊರೊನಾ ವೈರಸ್ ಹರಡದಂತೆ ತಡೆಗಟ್ಟುವ ನಿಟ್ಟಿನಲ್ಲಿ ಸಾರ್ವಜನಿಕರು ತಾಲೂಕು ಆಡಳಿತಕ್ಕೆ ಸಹಕರಿತಸುವಂತೆ ಹಾನಗಲ್ ತಹಶೀಲ್ದಾರ್ ಎರ್ರಿಸ್ವಾಮಿ ಮನವಿ ಮಾಡಿದ್ದಾರೆ. ಕೊರೊನಾ ವೈರಸ್ ದೇಶದ್ಯಾಂತ ವ್ಯಾಪಕವಾಗಿ ಹರಡುತ್ತಿದೆ. ಆದ್ದರಿಂದ ಸಾರ್ವಜನಿಕರು ಮನೆಯಿಂದ ಅನಾವಶ್ಯಕವಾಗಿ ಹೊರ ಬರದೆ ವೈರಸ್ ತಡೆಗಟ್ಟುವಲ್ಲಿ ಸಹಕರಿಸಬೇಕು ಎಂದಿದ್ದಾರೆ.

ಕೊರೊನಾ ಸೋಂಕು ಹತ್ತಿಕ್ಕಲು ಸಾರ್ವಜನಿಕರು ಸಹಕರಿಸಬೇಕು: ತಹಶೀಲ್ದಾರ್ ಮನವಿ

ತಾಲೂಕು ಆಡಳಿತ ಕೈಗೊಳ್ಳುವ ಮುನ್ನೆಚ್ಚರಿಕಾ ಕ್ರಮಗಳಿಗೆ ಸ್ಪಂದಿಸಿ ಸೋಂಕು ತಡೆಗಟ್ಟಲು ಸಹಕರಿಸುವಂತೆ ಮನವಿ ಮಾಡಿದರು. ಹೊರ ಜಿಲ್ಲೆ, ಹೊರ ರಾಜ್ಯಗಳಿಂದ ಬರುವ ಕಾರ್ಮಿಕರಿಗೆ ತಾಲೂಕಿನಲ್ಲಿ ಆಯ್ದ ಸ್ಥಳಗಳಲ್ಲಿ ಕ್ವಾರಂಟೈನ್ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.

ತಾಲೂಕಿನ ಗಡಿ ಭಾಗಗಳಲ್ಲಿ ಚೆಕ್​ ​ಪೋಸ್ಟ್​​​​ಗಳನ್ನು ತೆರೆಯಲಾಗಿದೆ. ಹೊರ ಜಿಲ್ಲೆಗಳಿಂದ ಬರುವ ವಾಹನಗಳನ್ನು ಕಟ್ಟುನಿಟ್ಟಾಗಿ ಪರಿಶೀಲಿಸಿ, ಆರೋಗ್ಯ ತಪಾಸಣೆ ಮಾಡಿ ಜನರನ್ನು ಒಳ ಬಿಡಲಾಗುತ್ತಿದೆ ಎಂದರು. ಅಲ್ಲದೆ ಈ ಕೊರೊನಾ ಮಹಾಮಾರಿಯನ್ನು ತಡೆಯಲು ಹೆಚ್ಚಿನ ರೀತಿಯಲ್ಲಿ ಸಾರ್ವಜನಿಕರ ಸಹಕಾರದ ಅವಶ್ಯಕತೆ ಇದೆ ಎಂದರು.

ABOUT THE AUTHOR

...view details