ಕರ್ನಾಟಕ

karnataka

By

Published : Apr 21, 2020, 11:35 AM IST

ETV Bharat / state

ಲಾಕ್​ಡೌನ್​ನಿಂದ ಬಾರ್ ಬಂದ್​​: ಮದ್ಯ ಪ್ರಿಯರಿಗೆ ಕಾಡ್ತಿದೆ ಖಿನ್ನತೆ

ಹಾವೇರಿ ಜಿಲ್ಲೆಯಲ್ಲಿ ಕೊರೊನಾ ವೈರಸ್ ಬಗ್ಗೆ ಇಲ್ಲಸಲ್ಲದ ಗಾಳಿ ಮಾತುಗಳಿಂದ ಬಹುತೇಕ ಜನ ಭಯಭೀತರಾಗಿದ್ದಾರೆ. ಮತ್ತೆ ಕೆಲ ಮದ್ಯ ವ್ಯಸನಿಗಳು ಮಾನಸಿಕ ಖಿನ್ನತೆಗೆ ಒಳಗಾಗುತ್ತಿದ್ದಾರೆ.

sdsdd
ಖಿನ್ನತೆಗೆ ಒಳಗಾಗುತ್ತಿದ್ದಾರೆ ಮದ್ಯ ಪ್ರಿಯರು

ಹಾವೇರಿ: ಲಾಕ್​ಡೌನ್‌ನಿಂದ ಮದ್ಯದಂಗಡಿ ಬಂದ್ ಮಾಡಿರುವ ಪರಿಣಾಮ ಮದ್ಯವ್ಯಸನಿಗಳು ವಿಚಿತ್ರವಾಗಿ ವರ್ತಿಸುತ್ತಿದ್ದರೆ, ಜನಸಾಮಾನ್ಯರಲ್ಲಿ ಭಯ ಆವರಿಸಿದೆ.

ಮದ್ಯ ಸಿಗದೆ ಖಿನ್ನತೆಗೆ ಒಳಗಾಗುತ್ತಿದ್ದಾರೆ ಕುಡುಕರು

ಮದ್ಯದಂಗಡಿಗಳು ಬಂದ್ ಆಗಿರುವುದರಿಂದ ಖಿನ್ನತೆಗೆ ಒಳಗಾದಂತೆ ವರ್ತಿಸುವ ಕುಡುಕರು ಮನೆಯ ಸದಸ್ಯರಿಗೆ ಬಡಾವಣಿಯಲ್ಲಿರುವ ಜನರಿಗೆ ಕಿರಿಕಿರಿ ಉಂಟುಮಾಡುತ್ತಿದ್ದಾರೆ. ಈ ಕುರಿತಂತೆ ಮನೆಯ ಸದಸ್ಯರು ಭಯಪಡುವ ಅವಶ್ಯಕತೆ ಇಲ್ಲಾ ಎನ್ನುತ್ತಿದ್ದಾರೆ ಮನೋವೈದ್ಯರು.

ಒಂದು ಚಟಕ್ಕೆ ದಾಸರಾಗಿ ನಂತರ ಅದನ್ನ ನಿಲ್ಲಿಸಿದಾಗ ದೇಹದಲ್ಲಿ ಹಲವು ಬದಲಾವಣೆಯಾಗುತ್ತವೆ. ಈ ರೀತಿಯಿಂದ ಚಟಕ್ಕೆ ಅಂಟಿಕೊಂಡವರು ವಿಚಿತ್ರವಾಗಿ ವರ್ತಿಸಲಾರಂಭಿಸುತ್ತಾರೆ. ಆ ಸಮಯದಲ್ಲಿ ಮನೆಯ ಸದಸ್ಯರು ಮದ್ಯವ್ಯಸನಿಯನ್ನು ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆ ಕೊಡಿಸುವಂತೆ ವೈದ್ಯರು ಸಲಹೆ ನೀಡಿದ್ದಾರೆ.

ABOUT THE AUTHOR

...view details