ಕರ್ನಾಟಕ

karnataka

ETV Bharat / state

C M Udasi Funeral: ಉದಾಸಿ ಅಂತ್ಯಕ್ರಿಯೆಗೆ ವಿರಕ್ತಮಠದಲ್ಲಿ ಸಕಲ ಸಿದ್ಧತೆ

ಬೆಂಗಳೂರಿನಿಂದ ವಿಶೇಷ ವಾಹನದಲ್ಲಿ ಹೊರಟಿರೋ ಶಾಸಕ ಉದಾಸಿ ಪಾರ್ಥಿವ ಶರೀರ ಮಧ್ಯಾಹ್ನ 12 ಗಂಟೆಗೆ ಹಾನಗಲ್ ತಲುಪಲಿದೆ. ಅಂತ್ಯಕ್ರಿಯೆಗೆ ಹಾನಗಲ್​ನ ವಿರಕ್ತಮಠದ ರುದ್ರಭೂಮಿಯಲ್ಲಿ ಸಕಲ ಸಿದ್ದತೆ ನಡೆಸಲಾಗುತ್ತಿದೆ.

By

Published : Jun 9, 2021, 9:13 AM IST

Virakthmath
Virakthmath

ಹಾವೇರಿ:ಬಿಜೆಪಿ‌ ಶಾಸಕ ಸಿ.ಎಂ.ಉದಾಸಿ ಅಂತ್ಯಕ್ರಿಯೆ ಇಂದು ಸಂಜೆ ಜಿಲ್ಲೆಯ ಹಾನಗಲ್ ಪಟ್ಟಣದ ವಿರಕ್ತಮಠದ ರುದ್ರಭೂಮಿಯಲ್ಲಿ ನಡೆಯಲಿದೆ.

ಬೆಂಗಳೂರಿನಿಂದ ವಿಶೇಷ ವಾಹನದಲ್ಲಿ ಹೊರಟಿರೋ ಪಾರ್ಥಿವ ಶರೀರ ಮಧ್ಯಾಹ್ನ 12 ಗಂಟೆಗೆ ಹಾನಗಲ್ ತಲುಪಲಿದೆ. ಮಧ್ಯಾಹ್ನ ಒಂದು ಗಂಟೆಗೆ ಗೌಳಿ ಗಲ್ಲಿಯ ನಿವಾಸದಲ್ಲಿ ಕುಟುಂಬಸ್ಥರು ಪೂಜೆ ಸಲ್ಲಿಸಲಿದ್ದಾರೆ. ಆ ಬಳಿಕ ವಿರಕ್ತಮಠದ ಆವರಣದಲ್ಲಿ ಮೃತದೇಹವನ್ನು ಸಾರ್ವಜನಿಕ ದರ್ಶನಕ್ಕೆ ಇಡಲಾಗುತ್ತದೆ.

ಸಾರ್ವಜನಿಕ ದರ್ಶನಕ್ಕಿಡಲು ವಿರಕ್ತಮಠದ ಆವರಣದಲ್ಲಿ ವ್ಯವಸ್ಥೆ ಮಾಡಲಾಗಿದ್ದು, ಕೋವಿಡ್ ಕಾರಣದಿಂದ ಅಂತರ ಕಾಯ್ದುಕೊಂಡು ದರ್ಶನ ಪಡೆಯಲು ಬ್ಯಾರಿಕೇಡ್​ಗಳನ್ನು ಹಾಕಲಾಗಿದೆ. ಸಾರ್ವಜನಿಕ ದರ್ಶನದ ಬಳಿಕ ಸಂಜೆ 4 ಗಂಟೆಗೆ ಲಿಂಗಾಯತ ವಿಧಿ ವಿಧಾನದ ಪ್ರಕಾರ ಅಂತ್ಯಕ್ರಿಯೆ ನಡೆಯಲಿದೆ.

ಇದನ್ನೂ ಓದಿ:ಸ್ವಗ್ರಾಮದತ್ತ ಸಿ.ಎಂ.ಉದಾಸಿ ಪಾರ್ಥಿವ ಶರೀರ: ಸಂಜೆ ಅಂತ್ಯಕ್ರಿಯೆ

ABOUT THE AUTHOR

...view details