ಹಾವೇರಿ: ಜಿಲ್ಲೆಯ ಪ್ರಮುಖ ವಾಣಿಜ್ಯನಗರಿ ರಾಣೆಬೆನ್ನೂರು. ಇಲ್ಲಿ ಹಾದು ಹೋಗಿರುವ ಬಾಗಲಕೋಟೆ ಮತ್ತು ಬಿಳಿಗಿರಿ ರಂಗನಬೆಟ್ಟದ ರಾಜ್ಯ ಹೆದ್ದಾರಿಯಲ್ಲಿ ರೈಲು ಇಲಾಖೆ ಕೆಳಸೇತುವೆ ನಿರ್ಮಿಸಿದೆ. ಆದರೆ, ಈ ಕಾಮಗಾರಿ ಅವೈಜ್ಞಾನಿಕ ಎಂದು ಆರೋಪಿಸಿ ರೈತರು ಹಲವು ಬಾರಿ ಮನವಿ ಸಲ್ಲಿಸಿದ್ದರು. ಆದರೆ ರೈಲು ಇಲಾಖೆಯಾಗಲೀ, ಪಿಡಬ್ಲೂಡಿ ಇಲಾಖೆಯಾಗಲಿ ಯಾವುದೇ ರೀತಿ ತೆಲೆಕೆಡಿಸಿಕೊಳ್ಳದೆ ಸೇತುವೆ ನಿರ್ಮಿಸಿಬಿಟ್ಟಿವೆ.
ಜಲಾಶಯಕ್ಕೆ ಬಾಗಿನ ಅರ್ಪಿಸೋದು ನೋಡಿದ್ವಿ, ಆದರೆ ಇಲ್ಲೇನು ಮಾಡಿದ್ರು? - unscientific bridge in ranebennur
ತುಂಬಿದ ಕೆರೆಗೆ ಅಥವಾ ಜಲಾಶಯಗಳಿಗೆ ಬಾಗಿನ ಅರ್ಪಿಸೋದು ಪದ್ದತಿ. ಆದರೆ ಇಲ್ಲಿ ಜನರು ಸೇತುವೆಗೆ ಬಾಗಿನ ಅರ್ಪಿಸಿದ್ದಾರೆ.
![ಜಲಾಶಯಕ್ಕೆ ಬಾಗಿನ ಅರ್ಪಿಸೋದು ನೋಡಿದ್ವಿ, ಆದರೆ ಇಲ್ಲೇನು ಮಾಡಿದ್ರು?](https://etvbharatimages.akamaized.net/etvbharat/prod-images/768-512-4650280-thumbnail-3x2-vicky.jpg)
ರೈಲು ಇಲಾಖೆ ಕೆಳಸೇತುವೆ
ತಮ್ಮ ಅಸಮಾಧಾನವನ್ನು ಹಳ್ಳಿಗರು ಹೇಗೆ ಹೊರಹಾಕಿದ್ದಾರೆ ನೋಡಿ
ಪರಿಣಾಮ ಇಲ್ಲಿ ಮಳೆಯಾದ್ರೆ ಸಾಕು ಕೆಳಸೇತುವೆ ಮೇಲೆ ನೂರುಮೀಟರ್ ಉದ್ದ ಮಳೆನೀರು ನಿಂತು ಜನರಿಗೆ ಸಂಚರಿಸಲು ತೊಂದರೆಯಾಗ್ತಿದೆ. ಈ ಬಗ್ಗೆ ಹಲವು ಬಾರಿ ಮನವಿ ಸಲ್ಲಿಸಿದ್ರೂ ಯಾವುದೇ ಪ್ರಯೋಜನ ಕಾಣದ ಹಿನ್ನೆಲೆಯಲ್ಲಿ ಸ್ಥಳೀಯರು ಇಂದು ಇದನ್ನೇ ಈಜುಗೊಳದಂತೆ ಬಳಸಿ ಈಜಾಟವಾಡಿದ್ದಾರೆ. ಅಷ್ಟೇ ಅಲ್ಲದೇ, ಇಲಾಖೆಗಳಿಗೆ ನಾಚಿಕೆಯಾಗಲಿ ಎಂದು ಸೇತುವೆಯಲ್ಲಿ ನಿಂತ ನೀರಿಗೆ ಬಾಗಿನ ಅರ್ಪಿಸಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.