ಕರ್ನಾಟಕ

karnataka

ETV Bharat / state

ಗ್ರಾಮೀಣ ಭಾಗದ ಜನತೆ ಕೂಲಿ ಕೆಲಸವಿಲ್ಲದೆ ಪರದಾಡಬೇಕಿಲ್ಲ: ಸಿ.ಎಂ.ಉದಾಸಿ - ಆರು ಸಾವಿರಕ್ಕೂ ಹೆಚ್ಚು ಕಾರ್ಮಿಕರಿಗೆ ಉದ್ಯೋಗ ಖಾತ್ರಿ

ಲಾಕ್​ಡೌನ್​ ಹಿನ್ನೆಲೆ ಸರ್ಕಾರ ಉದ್ಯೋಗ ಖಾತ್ರಿ ಯೋಜನೆಯಡಿ ಜನರಿಗೆ ಕೆಲಸ ನೀಡುತ್ತಿದೆ. ಗ್ರಾಮೀಣ ಭಾಗದ ಜನತೆ ಕೂಲಿ ಕೆಲಸವಿಲ್ಲದೆ ಪರದಾಡಬೇಕಿಲ್ಲ ಎಂದು ಶಾಸಕ ಸಿ.ಎಂ.ಉದಾಸಿ ಹೇಳಿದರು.

CM Udasi
ಸಿ.ಎಂ ಉದಾಸಿ

By

Published : May 20, 2020, 1:23 PM IST

ಹಾನಗಲ್:ತಾಲೂಕಿನಲ್ಲಿ ಪ್ರತಿನಿತ್ಯ ಆರು ಸಾವಿರಕ್ಕೂ ಹೆಚ್ಚು ಕಾರ್ಮಿಕರಿಗೆ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ನೀಡಲಾಗುತ್ತಿದೆ ಎಂದು ಶಾಸಕ ಸಿ.ಎಂ.ಉದಾಸಿ ತಿಳಿಸಿದರು.

ಲಾಕ್​ಡೌನ್​ ಹಿನ್ನೆಲೆ ಸರ್ಕಾರ ಉದ್ಯೋಗ ಖಾತ್ರಿ ಯೋಜನೆಯಡಿ ಜನರಿಗೆ ಕೆಲಸ ನೀಡುತ್ತಿದೆ. ಗ್ರಾಮೀಣ ಭಾಗದ ಜನತೆ ಕೂಲಿ ಕೆಲಸವಿಲ್ಲದೆ ಪರದಾಡಬೇಕಿಲ್ಲ. ಎಲ್ಲರಿಗೂ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ನೀಡಲಾಗುತ್ತಿದೆ ಎಂದರು.

ಸಿ.ಎಂ.ಉದಾಸಿ

ತಾಲೂಕಿನಲ್ಲಿ ಪ್ರತಿನಿತ್ಯ ಅಂದಾಜು 17 ಲಕ್ಷ ರೂ.ಗಳವರೆಗೆ ಕೂಲಿ ನೀಡಲಾಗುತ್ತಿದೆ. ನಿಮ್ಮ ಊರಿನಲ್ಲಿರುವ ಕೆರೆ ಕಟ್ಟೆಗಳ ಹೂಳು ಎತ್ತುವುದರ ಮೂಲಕ ಉದ್ಯೋಗವನ್ನ ಪಡೆದುಕೊಳ್ಳಬಹುದು ಎಂದು ಹೇಳಿದರು.

ABOUT THE AUTHOR

...view details