ಕರ್ನಾಟಕ

karnataka

By

Published : Apr 23, 2019, 9:46 PM IST

ETV Bharat / state

ಹಾವೇರಿಯಲ್ಲಿ ಶಾಂತಿಯುತ ಮತದಾನ: ಅಭ್ಯರ್ಥಿಗಳ ಭವಿಷ್ಯ ಮತಯಂತ್ರದಲ್ಲಿ ಭದ್ರ

ರಾಜ್ಯದಲ್ಲಿ ಇಂದು ಎರಡನೇ ಹಂತದ ಮತದಾನವೂ ಮುಕ್ತಾಯಗೊಂಡಿದೆ. ಎಲ್ಲೆಡೆ ಶಾಂತಿಯುತ ಮತದಾನವಾಗಿದ್ದು, ಹಾವೇರಿಯಲ್ಲೂ ಶಾಂತಿಯುತವಾಗಿ ಮುಕ್ತಾಯಗೊಂಡಿದೆ.

ಹಾವೇರಿಯಲ್ಲಿ ಶಾಂತಿಯುತ ಮತದಾನ

ಹಾವೇರಿ : ಇಂದು ಹಾವೇರಿ ಲೋಕಸಭಾ ಕ್ಷೇತ್ರಕ್ಕೆ ನಡೆದ ಮತದಾನ ಬಹುತೇಕ ಶಾಂತಿಯುತವಾಗಿ ಮುಕ್ತಾಯಗೊಂಡಿದೆ.

ಜಿಲ್ಲೆಯಲ್ಲಿ ಸಂಜೆಯವರೆಗೆ ಮತ ಚಲಾವಣೆಯಾಗಿದ್ದು, ಸುಮಾರು 75 ಪ್ರತಿಶತ ಮತದಾನವಾಗಿದೆ ಎನ್ನಲಾಗಿದೆ. ಕೆಲ ಮತಗಟ್ಟೆಗಳಲ್ಲಿ ಸಣ್ಣ-ಪುಟ್ಟ ತೊಂದರೆಗಳನ್ನು ಬಿಟ್ಟರೆ ಮತದಾನ ಶಾಂತಿಯುತವಾಗಿ ಮುಕ್ತಾಯಗೊಂಡಿದೆ. ಹತ್ತು ಅಭ್ಯರ್ಥಿಗಳ ಭವಿಷ್ಯ ಮತಯಂತ್ರ ಸೇರಿದ್ದು, ಸದ್ಯ ಮೇ 23 ರಂದು ನಡೆಯುವ ಮತ ಎಣಿಕೆಯತ್ತ ಎಲ್ಲರ ಚಿತ್ತ ನೆಟ್ಟಿದೆ.

ಹಾವೇರಿಯಲ್ಲಿ ಶಾಂತಿಯುತ ಮತದಾನ

ಬಿಜೆಪಿ ಅಭ್ಯರ್ಥಿ ಶಿವಕುಮಾರ್ ಉದಾಸಿ ಮತ್ತು ಮೈತ್ರಿ ಪಕ್ಷದ ಡಿ.ಆರ್. ಪಾಟೀಲ್ ನಡುವೆ ನೇರಾನೇರ ಹಣಾಹಣಿ ಏರ್ಪಟ್ಟಿದ್ದು, ಮೇ 23ರಂದು ನಡೆಯುವ ಮತ ಎಣಿಕೆಯಂದು ವಿಜಯಮಾಲೆ ಯಾರ ಕೊರಳಿಗೆ ಬೀಳಲಿದೆ ಎಂಬುದನ್ನು ಕಾದು ನೋಡಬೇಕಿದೆ.

For All Latest Updates

TAGGED:

ABOUT THE AUTHOR

...view details