ಕರ್ನಾಟಕ

karnataka

ರೈಲ್ವೆ ಬ್ರಿಡ್ಜ್​ ಕೆಳಗಿನ ನೀರಲ್ಲಿ ಸಿಲುಕಿ ಎತ್ತು ಸಾವು... ಬಂಡಿಯಲ್ಲಿದ್ದ ನಾಲ್ವರು ಪ್ರಾಣಾಪಾಯದಿಂದ ಪಾರು

ರೈಲ್ವೆ ಬ್ರಿಡ್ಜ್​ ಕೆಳಗೆ ನಿಂತ ನೀರಿನಲ್ಲಿ ಎತ್ತಿನ ಗಾಡಿ ಸಿಲುಕಿ ಎತ್ತು ಸಾವನ್ನಪ್ಪಿರುವ ಘಟನೆ ಹಾವೇರಿ ಜಿಲ್ಲೆ ಸವಣೂರು ತಾಲೂಕಿನ ತಳ್ಳಳ್ಳಿಯಲ್ಲಿ ನಡೆದಿದೆ.

By

Published : Jun 26, 2019, 2:59 PM IST

Published : Jun 26, 2019, 2:59 PM IST

ಎತ್ತು ಸಾವು

ಹಾವೇರಿ:ಎತ್ತಿನ ಬಂಡಿ ನೀರಲ್ಲಿ ಸಿಲುಕಿ ಒಂದು ಎತ್ತು ಸಾವನ್ನಪ್ಪಿದ್ದು, ಬಂಡಿಯಲ್ಲಿದ್ದ ನಾಲ್ವರು ಪ್ರಾಣಾಪಾಯದಿಂದ ಪಾರಾದ ಘಟನೆ ಸವಣೂರು ತಾಲೂಕಿನ ತಳ್ಳಳ್ಳಿ ಗ್ರಾಮದ ಬಳಿ ನಡೆದಿದೆ.

ರೈಲ್ವೆ ಬ್ರಿಡ್ಜ್​ ಕೆಳಗೆ ಎತ್ತಿನಗಾಡಿ ಸಿಲುಕಿಕೊಂಡಿರುವ ದೃಶ್ಯಾವಳಿ

ಮಳೆಯಿಂದಾಗಿ ಎಂಟು ದಿನಗಳಿಂದ ರೈಲ್ವೆ ಬ್ರಿಡ್ಜ್ ಕೆಳಗೆ ನಿಂತುಕೊಂಡಿದ್ದ ನೀರಿನಲ್ಲೇ ರೈತ ಬಿತ್ತನೆ ಮಾಡಲು ಜಮೀನಿಗೆ ಎತ್ತಿನಗಾಡಿಯಲ್ಲಿ ತೆರಳುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ. ಗಾಡಿ ನೀರಿನಲ್ಲಿ ಸಿಲುಕಿ ಮುಂದೆ ಸಾಗಲು ಆಗದೆ ನಿಂಗಜ್ಜ ಕುರಬರ ಎಂಬುವರಿಗೆ ಸೇರಿದ ಎತ್ತು ಸಾವನ್ನಪ್ಪಿದೆ. ಎತ್ತಿನ ಬಂಡಿಯಲ್ಲಿ ಹೋಗುತ್ತಿದ್ದ ಮೂವರು ಮಹಿಳೆಯರನ್ನ ಪೊಲೀಸರು ರಕ್ಷಿಸಿದ್ದಾರೆ. ಸವಣೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ದಾಖಲಾಗಿದೆ.

For All Latest Updates

TAGGED:

ABOUT THE AUTHOR

...view details