ಹಾವೇರಿ: ಉಪಚುನಾವಣೆಯ ಫಲಿತಾಂಶದ ನಂತರ ಸಂಪುಟ ವಿಸ್ತರಣೆ ಅಥವಾ ಪುನರ್ ರಚನೆಯಾಗಲಿದೆ ಎಂದು ವಿಧಾನ ಪರಿಷತ್ ಸದಸ್ಯ ಎಂಟಿಬಿ ನಾಗರಾಜ್ ತಿಳಿಸಿದ್ದಾರೆ.
ಉಪಚುನಾವಣೆಯ ಫಲಿತಾಂಶದ ನಂತರ ಸಂಪುಟ ವಿಸ್ತರಣೆ, ಸಚಿವ ಸ್ಥಾನ ಸಿಗಲಿದೆ ಎಂದ ಎಂಟಿಬಿ.. - ಹೈಕಮಾಂಡ್ ಅನುಮತಿ ಪಡೆದು ಸಚಿವ ಸಂಪುಟ ವಿಸ್ತರಣೆ
ಸಿಎಂ ಬಿ.ಎಸ್ ಯಡಿಯೂರಪ್ಪ ನವರು ಹೈಕಮಾಂಡ್ ಅನುಮತಿ ಪಡೆದು ಸಚಿವ ಸಂಪುಟ ವಿಸ್ತರಣೆ ಮಾಡಲಿದ್ದಾರೆ. ನಾನು ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಬಂದಿದ್ದೇನೆ. ನನಗೆ ಸಚಿವ ಸ್ಥಾನ ಸಿಗುತ್ತೆ, ಯಾವ ಖಾತೆಯನ್ನಾದರೂ ನೀಡಲಿ ಅದನ್ನ ನಿಭಾಯಿಸುವುದಾಗಿ ನಾಗರಾಜ್ ತಿಳಿಸಿದರು.
![ಉಪಚುನಾವಣೆಯ ಫಲಿತಾಂಶದ ನಂತರ ಸಂಪುಟ ವಿಸ್ತರಣೆ, ಸಚಿವ ಸ್ಥಾನ ಸಿಗಲಿದೆ ಎಂದ ಎಂಟಿಬಿ.. mtb-nagaraj-talk-about-cabinet-expansion-news](https://etvbharatimages.akamaized.net/etvbharat/prod-images/768-512-9480247-thumbnail-3x2-hjh---copy-2.jpg)
ಸಚಿವ ಸ್ಥಾನ ಸಿಗಲಿದೆ ಎಂದ ಎಂಟಿಬಿ
ಸಚಿವ ಸ್ಥಾನ ಸಿಗಲಿದೆ ಎಂದ ಎಂಟಿಬಿ
ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಕಾಗಿನೆಲೆಯಲ್ಲಿ ಮಾತನಾಡಿದ ಅವರು, ಈ ತಿಂಗಳು 15 ಅಥವಾ 20ರ ಒಳಗೆ ಸಂಪುಟ ವಿಸ್ತರಣೆಯಾಗಲಿದೆ ಎಂದು ತಿಳಿಸಿದರು. ಸಿಎಂ ಬಿ.ಎಸ್ ಯಡಿಯೂರಪ್ಪ ನವರು ಹೈಕಮಾಂಡ್ ಅನುಮತಿ ಪಡೆದು ಸಚಿವ ಸಂಪುಟ ವಿಸ್ತರಣೆ ಮಾಡಲಿದ್ದಾರೆ.
ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಬಂದಿದ್ದೇನೆ. ನನಗೆ ಸಚಿವ ಸ್ಥಾನ ಸಿಗುತ್ತೆ, ಯಾವ ಖಾತೆಯನ್ನಾದರೂ ನೀಡಲಿ ಅದನ್ನ ನಿಭಾಯಿಸುವುದಾಗಿ ನಾಗರಾಜ್ ತಿಳಿಸಿದರು. ವಿನಯ ಕುಲಕರ್ಣಿ ಬಂಧನ ಕುರಿತಂತೆ ಮಾತನಾಡಿದ ಅವರು, ಸಿಬಿಐನವರು ವಿಚಾರಣೆಗಾಗಿ ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ನ್ಯಾಯಯುತವಾಗಿ ನ್ಯಾಯ ಸಿಗಬೇಕಿದೆ ಎಂದು ತಿಳಿಸಿದರು.