ಕರ್ನಾಟಕ

karnataka

By

Published : Aug 16, 2020, 3:14 PM IST

ETV Bharat / state

ಅಯೋಧ್ಯೆಗೆ ಅಡಿಗಲ್ಲು ಸಹಿಸದ ದುಷ್ಟ ಶಕ್ತಿಗಳಿಂದ ಕೃತ್ಯ: ಸಚಿವ ಬಿ.ಸಿ.ಪಾಟೀಲ್

ಅಯೋಧ್ಯೆಯಲ್ಲಿ ಶ್ರೀರಾಮಮಂದಿರಕ್ಕೆ ಅಡಿಗಲ್ಲು ಹಾಕಿದ್ದನ್ನು ಸಹಿಸಲಾಗದ ದುಷ್ಟ ಶಕ್ತಿಗಳು ಬೆಂಗಳೂರಿನಲ್ಲಿ ಗಲಭೆ ಸೃಷ್ಟಿಸಿದ್ದಾರೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ.

bc patil talks about bengaluru riot
ಸಚಿವ ಬಿ.ಸಿ ಪಾಟೀಲ್

ಹಾವೇರಿ: ಕೆ.ಜೆ.ಹಳ್ಳಿ ಮತ್ತು ಡಿ.ಜೆ.ಹಳ್ಳಿ ಗಲಭೆ ಪೂರ್ವನಿಯೋಜಿತ ಕೃತ್ಯ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ.

ಹಾವೇರಿ ಜಿಲ್ಲೆಯ ಹಿರೇಕೆರೂರಿನಲ್ಲಿರುವ ಸ್ವಗೃಹದಲ್ಲಿ ಮಾತನಾಡಿದ ಅವರು, ಉದ್ದೇಶಪೂರ್ವಕವಾಗಿ ಈ ಕೃತ್ಯ ನಡೆದಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರದ ಪ್ರತಿಷ್ಠೆಗೆ ಮಸಿ ಬಳಿಯಲು ಈ ಕೃತ್ಯ ಎಸಗಲಾಗಿದೆ ಎಂದು ತಿಳಿಸಿದರು.

ಬಿ.ಸಿ ಪಾಟೀಲ್, ಸಚಿವ

ಈ ಕೃತ್ಯಕ್ಕೆ ರಾಜಕೀಯ ಪಕ್ಷದ ಹಿನ್ನೆಲೆ ಇದೆ. ಕಾಂಗ್ರೆಸ್ ಪಕ್ಷಕ್ಕೆ ಒಬ್ಬ ದಲಿತ ಎಂಎಲ್ಎಗೆ ರಕ್ಷಣೆ ಕೊಡಲಾ ಗುತ್ತಿಲ್ಲ. ಕಾಂಗ್ರೆಸ್ ಪಕ್ಷ ಹೇಳುವಂತೆ ಬೆಂಕಿ ಹಚ್ಚಿದವರು ಅಮಾಯಕರಲ್ಲ, ಅವರು ದುಷ್ಕರ್ಮಿಗಳು, ಭಯೋತ್ವಾದಕರು, ದೇಶದ್ರೋಹಿಗಳು. ಅವರಿಗೆ ಸರ್ಕಾರ ತಕ್ಕ ಶಾಸ್ತಿ ಮಾಡುತ್ತೆ ಎಂದರು.

ABOUT THE AUTHOR

...view details