ಕರ್ನಾಟಕ

karnataka

ETV Bharat / state

ಆ್ಯಸಿಡ್ ಎರಚಿ ವಿವಾಹಿತ ಮಹಿಳೆ ಹತ್ಯೆಗೆ ಯತ್ನ : ಆರೋಪಿ ಅಂದರ್​! - haveri acide case latest news

ಮಹಿಳೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಮಂಜುನಾಥ ಎಂಬಾತ ಆಕೆಯನ್ನು ಸಿದ್ದನಗುಡ್ಡಕ್ಕೆ ಕರೆದೊಯ್ದು ಆ್ಯಸಿಡ್​ ಎರಚಿ ಹತ್ಯೆಗೆ ಯತ್ನಿಸಿರುವ ಘಟನೆ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಹುಣಸಿಕಟ್ಟಿ ಗ್ರಾಮದ ಬಳಿ‌ ನಡೆದಿದೆ‌.

Man Throw Acid and attempted murder of married woman
ಆ್ಯಸಿಡ್ಎರಚಿ ವಿವಾಹಿತ ಮಹಿಳೆ ಹತ್ಯೆಗೆ ಯತ್ನ : ಆರೋಪಿ ಅಂದರ್​!

By

Published : Jan 8, 2020, 11:30 AM IST

ಹಾವೇರಿ:ಆ್ಯಸಿಡ್ ಎರಚಿ ವಿವಾಹಿತ ಮಹಿಳೆ ಹತ್ಯೆಗೆ ಯತ್ನಿಸಿರುವ ಘಟನೆ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಹುಣಸಿಕಟ್ಟಿ ಗ್ರಾಮದ ಬಳಿ‌ ನಡೆದಿದೆ‌.

ಗ್ರಾಮದ ಬಳಿ ಇರುವ ಸಿದ್ದನಗುಡ್ಡಕ್ಕೆ ಮಹಿಳೆಯನ್ನ ಮಾತನಾಡಲು ಕರೆದೊಯ್ದು ಈ ಕೃತ್ಯ ಎಸಗಿದ್ದಾನೆ. ಆರೋಪಿಯನ್ನ ಶಿಗ್ಗಾಂವಿ ಪಟ್ಟಣದ ನಿವಾಸಿ ಮಂಜುನಾಥ ಕಳಸದ (42) ಎಂದು ಗುರುತಿಸಲಾಗಿದೆ.

ಮಹಿಳೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಮಂಜುನಾಥ ಮಹಿಳೆಯನ್ನು ಕರೆದುಕೊಂಡು ಹೋಗಿ ಆಕೆಯ ಗುಪ್ತಾಂಗ ಮತ್ತು ಕಾಲಿಗೆ ಆಸಿಡ್ ಎರಚುವ ಮೂಲಕ ವಿಕೃತಿ ಮೆರೆದಿದ್ದಾನೆ.

ಇನ್ನೂ ಗಾಯಾಳು ಮಹಿಳೆಯನ್ನ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆರೋಪಿ ಮಂಜುನಾಥ ಬಂಕಾಪುರ ಪೊಲೀಸರ ಬಲೆಗೆ ಬಿದ್ದಿದ್ದು, ಸದ್ಯ ಈ ಕುರಿತಂತೆ ಬಂಕಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details