ಹಾವೇರಿ :ವಿದ್ಯುತ್ ದುರಸ್ತಿಗೆ ಕಂಬ ಏರಿದ್ದ ಲೈನ್ ಮ್ಯಾನ್ಗೆ ವಿದ್ಯುತ್ ತಗುಲಿರುವ ಜಿಲ್ಲೆಯ ಶಿಗ್ಗಾವಿ ತಾಲೂಕಿನ ಹನುಮರಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ. ವಿದ್ಯುತ್ ಶಾಕ್ ತಗುಲಿದ ಯುವಕನನ್ನು ರಮೇಶ್ ವಾಲೀಕಾರ್(22) ಎಂದು ಗುರುತಿಸಲಾಗಿದೆ. ಈ ವೇಳೆ, ಕಂಬದಲ್ಲಿ ಸಿಲುಕಿದ್ದ ಯುವಕನನ್ನು ಗ್ರಾಮಸ್ಥರು ರಕ್ಷಿಸಿದ್ದಾರೆ.
ದುರಸ್ತಿ ವೇಳೆ ವಿದ್ಯುತ್ ತಂತಿ ತಗುಲಿ ಕಂಬದಲ್ಲೇ ನೇತಾಡಿದ ಲೈನ್ ಮ್ಯಾನ್: ಪರಿಸ್ಥಿತಿ ಗಂಭೀರ
ವಿದ್ಯುತ್ ದುರಸ್ತಿಗೆಂದು ಕಂಬ ಏರಿದ್ದ ಲೈನ್ ಮ್ಯಾನ್ಗೆ ತಂತಿ ತಗುಲಿ ಗಂಭೀರ ಗಾಯಗೊಂಡಿರುವ ಘಟನೆ ಹಾವೇರಿ ಜಿಲ್ಲೆಯ ಹನುಮರಹಳ್ಳಿ ಗ್ರಾಮದಲ್ಲಿ ನಡೆದಿದೆ.
ದುರಸ್ಥಿ ವೇಳೆ ವಿದ್ಯುತ್ ತಂತಿ ತಗುಲಿ ಕಂಬದಲ್ಲೇ ನೇತಾಡಿದ ಲೈನ್ ಮ್ಯಾನ್ : ಪರಿಸ್ಥಿತಿ ಗಂಭೀರ
ರಮೇಶ್ ಕಳೆದ ಕೆಲ ತಿಂಗಳಿಂದ ಗುತ್ತಿಗೆ ಆಧಾರದ ಮೇಲೆ ಲೈನ್ಮ್ಯಾನ್ ಆಗಿ ಕಾರ್ಯನಿರ್ವಹಿಸುತ್ತಿದ್ದನು. ಇಂದು ವಿದ್ಯುತ್ ಕಂಬ ದುರಸ್ತಿ ಸಂದರ್ಭದಲ್ಲಿ ವಿದ್ಯುತ್ ತಗುಲಿ ತೀವ್ರವಾಗಿ ಗಾಯಗೊಂಡಿದ್ದಾನೆ. ತಕ್ಷಣ ಯುವಕನನ್ನು ಶಿಗ್ಗಾವಿ ತಾಲೂಕು ಆಸ್ಪತ್ರೆಯಲ್ಲಿ ರವಾನಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದ್ದು, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಶಿಗ್ಗಾವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಓದಿ :ಖಾಸಗಿ ಡೈರಿ ಕದ್ದು ಓದಿದ ಚಿಕ್ಕಪ್ಪ- ಚಿಕ್ಕಮ್ಮ.. ಆತ್ಮಹತ್ಯೆಗೆ ಶರಣಾದ ಯುವತಿ!
Last Updated : Jul 21, 2022, 9:10 PM IST