ಹಾವೇರಿ: ಬೆಳೆಗಳ ರಕ್ಷಣೆಗೆ ರೈತರು ಹಾಕಿದ್ದ ಬಲೆಗೆ ಚಿರತೆ ಬಿದ್ದ ಘಟನೆ ಜಿಲ್ಲೆಯ ರಟ್ಟೀಹಳ್ಳಿ ತಾಲೂಕಿನ ಕೋಡಮಗ್ಗಿ ಗ್ರಾಮದಲ್ಲಿ ನಡೆದಿದೆ.
ಆಹಾರ ಹುಡುಕಿಕೊಂಡು ಬಂದ ಚಿರತೆಯು ಜಮೀನಿಗೆ ಹಾಕಿದ ತಂತಿ ಬೇಲಿಗೆ ಕಾಲು ಸಿಕ್ಕಿಕೊಂಡು ಓಡಲು ಸಾಧ್ಯವಾಗದೆ ಅಲ್ಲಿಯೇ ಒದ್ದಾಡುತ್ತಿತ್ತು. ಚಿರತೆ ಕಂಡ ಸ್ಥಳೀಯರು ಆತಂಕಗೊಂಡು ಕೂಡಲೇ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.